ಕಲಬುರ್ಗಿ : ಕಳೆದ ರಾತ್ರಿ ಸುರಿದಿದ್ದಂತ ಧಾರಾಕಾರ ಮಳೆಯಿಂದಾಗಿ, ಮನೆ ಕಟ್ಟೋದಕ್ಕೆ ತೆಗೆದಿದ್ದ ಗುಂಡಿಯಲ್ಲಿ ನೀರು ತುಂಬಿತ್ತು. ಹೀಗೆ ನೀರು ತುಂಬಿದ್ದಂತ ಗುಂಡಿಯಲ್ಲಿ ಆಟವಾಡಲು ಇಳಿದಂತ ಮೂವರು ಬಾಲಕರು ಧಾರುಣವಾಗಿ ಸಾವನ್ನಪ್ಪಿರೋ ಘಟನೆ, ಕಲಬುರ್ಗಿಯ ಮಹಾಲಕ್ಷ್ಮೀ ಲೇಔಟ್ ನಲ್ಲಿ ನಡೆದಿದೆ.
ಕಲಬುರ್ಗಿ ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿ ಮನೆ ನಿರ್ಮಾಣಕ್ಕಾಗಿ ವ್ಯಕ್ತಿಯೊಬ್ಬರು ಗುಂಡಿ ತೆಗೆದಿದ್ದರು. ಇಂತಹ ಗುಂಡಿಗೆ ಕಳೆದ ರಾತ್ರಿ ಸುರಿದಂತ ಭಾರಿ ಮಳೆಯಿಂದ ನೀರು ತುಂಬಿ, ಭರ್ತಿಯಾಗಿದ್ದವು. ಈ ಗುಂಡಿಯ ಆಳವನ್ನು ತಿಳಿಯದಂತ ದರ್ಶನ್(12), ಪ್ರಶಾಂತ(10) ಮತ್ತು ವಿಘ್ನೇಶ್(9) ನೀರಿನಲ್ಲಿ ಆಟವಾಡೋದಕ್ಕೆ ಇಳಿದಿದ್ದಾರೆ.
ನೀರಿನಲ್ಲಿ ಆಟವಾಡುತ್ತಾ ಆಳವಾದ ಗುಂಡಿಯಲ್ಲಿ ಈಜು ಬಾರದೇ ಸಾವನ್ನಪ್ಪಿದ್ದಾರೆ. ಮಕ್ಕಳು ಧಾರುಣವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ನ್ಯೂ ರಾಘವೇಂದ್ರ ನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.