News Karnataka Kannada
Monday, April 29 2024
ಕಲಬುರಗಿ

ಚುನಾವಣಾ ಕರ್ತವ್ಯದಲ್ಲಿ ನಿರತ ಪೊಲೀಸರು: ಎಲ್ಲೆಡೆ ದರೋಡೆ

Thieves loot gold, cash at Korangrapady
Photo Credit : News Kannada

ಕಲಬುರಗಿ: ಕಳೆದ ಎರಡು ದಿನಗಳಿಂದ ಕಲಬುರಗಿಯ ಆಳಂದ ರಸ್ತೆಯ ದೇವಿ ನಗರದಲ್ಲಿ ಸರಣಿ ಮನೆ ಒಡೆಯುವ ಘಟನೆ ನಡೆದಿದೆ.

ಚುನಾವಣೆ ನಡೆದ ಮೇ 10 ಮತ್ತು ಮೇ 11 ರಂದು ಎರಡು ದಿನಗಳ ಕಾಲ ದೇವಿನಗರ ಬಡಾವಣೆಗೆ ನುಗ್ಗಿದ ಕಳ್ಳರು ಆರು ಮನೆಗಳಿಗೆ ಕನ್ನ ಹಾಕಿದ್ದರು.

ಬೀಗ ಹಾಕಿದ್ದ ಎರಡು ಮನೆಗಳಲ್ಲಿ ಕಳ್ಳತನ ನಡೆದಿದ್ದರೆ, ಇನ್ನು ನಾಲ್ಕು ಮನೆಗಳಲ್ಲಿ ಮನೆಯವರಿಗೆ ಗೊತ್ತಾಗದಂತೆ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ.

ಪೊಲೀಸರು ಚುನಾವಣಾ ಭದ್ರತೆ ಹಾಗೂ ಮತ ಎಣಿಕೆ ಕಾರ್ಯದಲ್ಲಿ ನಿರತರಾಗಿದ್ದನ್ನು ಕಂಡು ದುಷ್ಕರ್ಮಿಗಳು ಏಕಕಾಲದಲ್ಲಿ ಈ ಕೃತ್ಯ ಎಸಗಿದ್ದಾರೆ.

ಕಳೆದೊಂದು ವಾರದಿಂದ ಮನೆ ಮುಂದೆ ನಿಲ್ಲಿಸಿದ್ದ ಎಂಟಕ್ಕೂ ಹೆಚ್ಚು ಬೈಕ್ ಗಳು ಕಳ್ಳತನವಾಗಿವೆ. ಒಟ್ಟಿನಲ್ಲಿ ದೇವಿನಗರದಲ್ಲಿ ಸರಣಿ ಮನೆಗಳ್ಳತನ, ಬೈಕ್ ಕಳ್ಳತನ ನಡೆದಿರುವುದು ಇಲ್ಲಿನ ನಿವಾಸಿಗಳನ್ನು ರಾತ್ರಿಯಿಡೀ ಜಾಗರಣೆ ಮಾಡುವಂತೆ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು