ಬೀದರ್: ಕಲ್ಲು ಕೋರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ನೀರುಪಾಲಾದ ಘಟನೆ ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಪತ್ನಾಪುರ ಗ್ರಾಮದಲ್ಲಿ ನಡೆದಿದೆ. ಇದೇ ಗ್ರಾಮದ ಇಸ್ಮಾಯಿಲ್ (21) ಮತ್ತು ಸಮೀರ್ (28) ಮೃತ ದುರ್ದೈವಿಗಳು.
ಈ ಊರಿನಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸಿದ ಕೋರೆಗಳಿವೆ. ಮಳೆಯಿಂದಾಗಿ ಅದರಲ್ಲಿ ನೀರು ತುಂಬಿದೆ. ಈ ನೀರಿನಲ್ಲಿ ಈಜಲೆಂದು ಇಳಿದ ಈ ಯುವಕರು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೊದಲು ಈಜಲೆಂದು ಇಳಿದ ಇಸ್ಮಾಯಿಲ್ಗೆ ಈಜು ಬರುತ್ತಿರಲಿಲ್ಲ. ಆತ ನೀರುಪಾಲಾಗಲು ಶುರುವಾದಾಗ ಅವನನ್ನು ಬದುಕಿಸಲು ಸಮೀರ್ ಇಳಿದಿದ್ದಾನೆ. ಆದರೆ, ಅವನು ಕೂಡಾ ಮುಳುಗಿದ್ದಾನೆ.
ಚಿಟಗುಪ್ಪಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಊರಿನ ಜನರು ಮತ್ತು ಪೊಲೀಸರು ಸೇರಿ ಯುವಕರನ್ನು ನೀರಿನಿಂದ ಮೇಲೆತ್ತಿದರು.