ಖಟಕಚಿಂಚೋಳಿ: ಸಮೀಪದ ಡಾವರಗಾಂವ್ ಗ್ರಾಮದ ರೈತ ಬಾಲಾಜಿ ಬಾಬುರಾವ್ ಕೋಟಗ್ಯಾಳೆ (28) ಸಾಲಬಾಧೆಯಿಂದ ಶುಕ್ರವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೃಷಿಗಾಗಿ ಎಸ್ಬಿಐ ಬ್ಯಾಂಕ್ ಸೇರಿದಂತೆ ವಿವಿಧೆಡೆ ಸುಮಾರು ₹2 ಲಕ್ಷ ಸಾಲವಿತ್ತು. ಅಲ್ಲದೇ ಬೇರೆಯವರ ಜಮೀನನ್ನು ವಾರ್ಷಿಕ ಲೆಕ್ಕದಲ್ಲಿ ಹಣ ನೀಡಿ ವ್ಯವಸಾಯ ಮಾಡುತ್ತಿದ್ದರು.
ಆದರೆ ಸೂಕ್ತವಾಗಿ ಲಾಭ ಬಾರದಿರುವುದರಿಂದ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಸಾಲಬಾಧೆಯಿಂದ ಮನನೊಂದು ವಿಷ ಸೇವಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಖಟಕಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.