ಬೀದರ್ : ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷವನ್ನ ಎಂದು ಸೇರಲ್ಲ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರಾಗಿರುವ ಸುದ್ದಿಯಾಗಿದೆ ಇದನ್ನು ಯಾರು ಕೂಡ ನಂಬಬೇಡಿ ಎಂದು ಶಾಸಕ ಶರಣು ಸಲಗಾರ ಅವರು ಹೇಳಿದ್ದಾರೆ.
ನೂತನವಾಗಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ವೀಕ್ಷಣೆಗಾಗಿ ಬಸವಕಲ್ಯಾಣ ನಗರಕ್ಕೆ ಸಚಿವರಾದ ಈಶ್ವರ್ ಖಂಡ್ರೆ ಅವರು ಆಗಮಿಸಿದ ಹಿನ್ನೆಲೆಯಲ್ಲಿ ನಾನು ಅವರ ಪಾದ ಮುಟ್ಟಿ ನಮಸ್ಕಾರ ಮಾಡಿದ್ದೇನೆ ಹಿರಿಯರು ಎಂಬ ಮನೋಭಾವದಿಂದ ನಾನು ನಮಸ್ಕಾರ ಮಾಡಿದ್ದೇನೆ ಆದರೆ ಇದರ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡುತ್ತಿದ್ದಾರೆ ಎಂದರು.