ಬೀದರ್: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಸಮಾಜಘಾತುಕ ಶಕ್ತಿಗಳಿಗೆ ಬೂಸ್ಟ್ ಸಿಕ್ಕಂತಾಗುತ್ತದೆ. ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿ ಹಿಂದೂಗಳ ಮೇಲೆ ಹಲ್ಲೆ ನಡೆಸಲಾಗಿತ್ತು. ಈಗ ಚಿತ್ತಾಪುರ ತಾಲೂಕಿನ ಹಲಕರ್ಟಿಯಲ್ಲಿ ಬಸವೇಶ್ವರರ ಭಾವಚಿತ್ರ ಸುಟ್ಟು ಹಾಕಿ ದುಷ್ಕೃತ್ಯ ಎಸಗಲಾಗಿದೆ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದ್ದಾರೆ.
ಬಸವೇಶ್ವರರ ಭಾವಚಿತ್ರ ಸುಟ್ಟು ಹಾಕಿ ದುಷ್ಕೃತ್ಯ ಎಸಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ. ತನ್ನ ಮತ ಬ್ಯಾಂಕ್ಗಾಗಿ ದುಷ್ಟರನ್ನು ಕಾಂಗ್ರೆಸ್ ನಾಯಕರು ಕಾಪಾಡುತ್ತಾರೆ. ಈ ಧೈರ್ಯದಿಂದಲೇ ಇಂತಹ ದುಷ್ಕೃತ್ಯಗಳು ಮೇಲಿಂದ ಮೇಲೆ ರಾಜ್ಯದಲ್ಲಿ ನಡೆಯುತ್ತಿವೆ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎನ್ನುವುದಕ್ಕೆ ಚಿತ್ತಾಪುರ ಘಟನೆಯೇ ಸಾಕ್ಷಿ. ಬಸವೇಶ್ವರರು ಒಂದು ಜಾತಿಗೆ ಸೇರಿದವರಲ್ಲ. ಅವರ ಸಂದೇಶಗಳಿಗೆ ಇಡೀ ವಿಶ್ವವೇ ಮಾರು ಹೋಗಿದೆ. ಹೀಗಿರುವಾಗ ಇಂತಹ ಹೇಯ ಕೃತ್ಯ ನಡೆಸಿದ ದುಷ್ಟರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ ಎನ್ನುವುದಕ್ಕೆ ಚಿತ್ತಾಪುರ ಘಟನೆಯೇ ಸಾಕ್ಷಿ. ಬಸವೇಶ್ವರರು ಒಂದು ಜಾತಿಗೆ ಸೇರಿದವರಲ್ಲ. ಅವರ ಸಂದೇಶಗಳಿಗೆ ಇಡೀ ವಿಶ್ವವೇ ಮಾರು ಹೋಗಿದೆ. ಹೀಗಿರುವಾಗ ಇಂತಹ ಹೇಯ ಕೃತ್ಯ ನಡೆಸಿದ ದುಷ್ಟರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಲಿಂಗಾಯತರಿಗೆ ಅವಮಾನ ಮಾಡಲಾಗುತ್ತಿದೆ, ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್ಸಿನ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪನವರು ಹೇಳಿದ ಮಾತು ಸತ್ಯವೆಂದು ಈ ಘಟನೆಯಿಂದ ಸಾಬೀತಾಗಿದೆ. ರಾಜ್ಯದಲ್ಲಿ ಲಿಂಗಾಯತ ಜನರಿಗಷ್ಟೆ ಅಲ್ಲ, ಲಿಂಗಾಯತರು ಪೂಜಿಸಿ ಗೌರವಿಸುವ ದೇವರುಗಳಿಗೆ ಮತ್ತು ಅವರ ಆಚರಣೆಗಳಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಬೆಲೆಯಿಲ್ಲ. ಲಿಂಗಾಯತರನ್ನು ಹಾಗೂ ಬಹುಸಂಖ್ಯಾತರನ್ನು ಅವಮಾನಿಸುವ ಕೆಲಸ ಕಾಂಗ್ರೆಸ್ ಬಹುಕಾಲದಿಂದಲೂ ಮಾಡಿಕೊಂಡು ಬಂದಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಲಿಂಗಾಯತರಿಗೆ ಅವಮಾನ ಮಾಡಲಾಗುತ್ತಿದೆ, ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್ಸಿನ ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪನವರು ಹೇಳಿದ ಮಾತು ಸತ್ಯವೆಂದು ಈ ಘಟನೆಯಿಂದ ಸಾಬೀತಾಗಿದೆ. ರಾಜ್ಯದಲ್ಲಿ ಲಿಂಗಾಯತ ಜನರಿಗಷ್ಟೆ ಅಲ್ಲ, ಲಿಂಗಾಯತರು ಪೂಜಿಸಿ ಗೌರವಿಸುವ ದೇವರುಗಳಿಗೆ ಮತ್ತು ಅವರ ಆಚರಣೆಗಳಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಬೆಲೆಯಿಲ್ಲ. ಲಿಂಗಾಯತರನ್ನು ಹಾಗೂ ಬಹುಸಂಖ್ಯಾತರನ್ನು ಅವಮಾನಿಸುವ ಕೆಲಸ ಕಾಂಗ್ರೆಸ್ ಬಹುಕಾಲದಿಂದಲೂ ಮಾಡಿಕೊಂಡು ಬಂದಿದೆ ಎಂದು ಆರೋಪಿಸಿದ್ದಾರೆ.
ದುಷ್ಕೃತ್ಯದಲ್ಲಿ ಯಾರೇ ಶಾಮಿಲಾಗಿರಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಎಲ್ಲಾ ಜಾತಿ ಜನಾಂಗದವರಿಗೆ ನ್ಯಾಯ ಒದಗಿಸುವ ಕೆಲಸ ಸರ್ಕಾರ ಮಾಡಬೇಕು. ಅಧಿಕಾರದ ಆಸೆಗೆ ಒಬ್ಬರ ಮೇಲೆ ಮತ್ತೊಬ್ಬರಿಗೆ ಎತ್ತಿ ಕಟ್ಟುವ ಕೆಲಸ ಮಾಡಬಾರದು ಎಂದು ಸಲಹೆ ಮಾಡಿದ್ದಾರೆ.