News Karnataka Kannada
Sunday, April 28 2024
ಬೀದರ್

ತರಕಾರಿ ಬೀಜ, ಸೋಯಾಬೀನ್, ತೊಗರಿ ಅಗ್ನಿಗೆ ಆಹುತಿ

Bidr
Photo Credit : NewsKarnataka

ಬೀದರ್ : ವಿವಿಧ ತರಕಾರಿಗಳ ಬೀಜ ಹಾಗೂ ಆಹಾರ ಧಾನ್ಯ ಸಂಗ್ರಹಿಸಿ ಇಟ್ಟಿದ್ದ ತಾಲ್ಲೂಕಿನ ಬಗದಲ್ ಗ್ರಾಮದ ವಿಶಾಲ ಗೋದಾಮಿನಲ್ಲಿ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಗ್ರಾಮದ ತರಕಾರಿ ಬೀಜಗಳ ವ್ಯಾಪಾರಿ ಬಾಕಿ ಸೇಠ್ ಎಂಬುವರಿಗೆ ಸೇರಿದ ಗೋದಾಮಿನಲ್ಲಿ ಸಂಭವಿಸಿದ ಘಟನೆಯಲ್ಲಿ ಈರುಳ್ಳಿ ಬೀಜ ಅತಿ ಹೆಚ್ಚು ಪ್ರಮಾಣದಲ್ಲಿ ಬೆಂಕಿಗೆ ಆಹುತಿಯಾಗಿದೆ.

ಚಿಯಾ, ಗೋಳಿ ಸೊಪ್ಪು ಬೀಜ, ಸೋಯಾಬೀನ್, ತೊಗರಿ, ಪಿವಿಸಿ ಪೈಪ್ ಮೊದಲಾದ ವಸ್ತುಗಳು ಸುಟ್ಟು ಕರಕಲಾಗಿವೆ. ಗೋದಾಮಿನಲ್ಲಿ ಬಿರುಕು ಸಹ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದಿಂದ ಬೆಂಕಿ ನಿಯಂತ್ರಣ: ಅಗ್ನಿಶಾಮಕ ದಳದ 18 ಸಿಬ್ಬಂದಿಯ ತಂಡ ಎರಡೂವರೆ ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿತು. ಆಗಬಹುದಾಗಿದ್ದ ಹೆಚ್ಚಿನ ಹಾನಿ ತಪ್ಪಿಸಿತು.

ಸಂಜೆ ಗೋದಾಮಿನಲ್ಲಿ ಬೆಂಕಿ ತಗುಲಿದ ಮಾಹಿತಿ ಬಂದಿತು. ತಕ್ಷಣ ಬೀದರ್‍ನಿಂದ ಎರಡು ಹಾಗೂ ಹುಮನಾಬಾದ್‍ನಿಂದ ಒಂದು ವಾಹನ ಸೇರಿ ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ನಿರಂತರ ಎರಡೂವರೆ ತಾಸು ಕಾರ್ಯಾಚರಣೆ ಕೈಗೊಂಡು ಬೆಂಕಿ ನಿಯಂತ್ರಿಸಲಾಯಿತು ಎಂದು ಕಾರ್ಯಾಚರಣೆ ನೇತೃತ್ವ ವಹಿಸಿದ್ದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರವೀಂದ್ರ ಎ. ಘಾಟಗೆ ತಿಳಿಸಿದರು.

ಹಳೆಯ ಆಸ್ಪತ್ರೆ ಸಮೀಪದ ಗೋದಾಮು ಸುತ್ತಮುತ್ತ ಮನೆಗಳು ಇವೆ. ಇತರೆಡೆ ವ್ಯಾಪಿಸದಂತೆ ಬೆಂಕಿ ನಿಯಂತ್ರಿಸಲಾಗಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಘಟನೆಗೆ ಕಾರಣ ತಿಳಿದಿಲ್ಲ ಎಂದು ಅವರು ಹೇಳಿದರು. ₹2 ಕೋಟಿ ನಷ್ಟ: ಅವಘಡದಲ್ಲಿ ಸುಮಾರು ₹2 ಕೋಟಿ ನಷ್ಟ ಉಂಟಾಗಿದೆ ಎಂದು ಗೋದಾಮಿನ ಮಾಲೀಕ ಬಾಕಿ ಸೇಠ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

150×140 ಅಡಿಯ ಗೋದಾಮಿನಲ್ಲಿ ಈರುಳ್ಳಿ, ಚಿಯಾ, ಗೋಳಿ ಸೊಪ್ಪು, 65 ಚೀಲ ಸೋಯಾಬೀನ್, 50 ಚೀಲ ತೊಗರಿ, ಪಿವಿಸಿ ಪೈಪ್ ಮೊದಲಾದವುಗಳನ್ನು ಇಡಲಾಗಿತ್ತು. ಅವಘಡದಲ್ಲಿ ಅವುಗಳೆಲ್ಲ ಬೆಂಕಿಗೆ ಆಹುತಿಯಾಗಿವೆ ಎಂದು ಹೇಳಿದರು.

ತಮ್ಮಲ್ಲಿ ಸಿದ್ಧಪಡಿಸುವ ತರಕಾರಿ ಬೀಜಗಳನ್ನು ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.
ಬಗದಲ್ ಪೊಲೀಸ್ ಠಾಣೆ ಸಬ್ ಇನ್‍ಸ್ಪೆಕ್ಟರ್ ನಿಂಗಪ್ಪ ಮಣ್ಣೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು