ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್ನ ಉಗ್ರನ ಜಾಡು ಹಿಡಿದು ಹೊರಟಿದ್ದ ಎನ್ಐಎ, ಮೇಜರ್ ಆಪರೇಷನ್ ಮಾಡಿದೆ. ಬಾಂಬರ್ಗೆ ಸಹಾಯ ಮಾಡಿದ್ದವ ಬಲೆಗೆ ಬಿದ್ದಿದ್ದಾನೆ.
ಹೌದು. . ಕಳೆದ ದಿನ ಕರ್ನಾಟಕ, ತಮಿಳುನಾಡು ಹಾಗೂ ಉತ್ತರಪ್ರದೇಶದ 18 ಕಡೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ರು. ಈ ವೇಳೆ ಕೆಫೆ ಬ್ಲಾಸ್ಟ್ನ ಬಾಂಬರ್ಗೆ ಸಹಾಯ ಮಾಡಿದ್ದ ಮುಜಾಮಿಲ್ ಶರೀಫ್ ಎಂಬಾತನನ್ನ ಅರೆಸ್ಟ್ ಮಾಡಿದೆ. ತನಿಖೆ ವೇಳೆ ಕೆಫೆಯಲ್ಲಿ ಬಾಂಬ್ ಇಟ್ಟಿರೋದು ಮುಸಾವೀರ್ ಶಾಜೀಬ್ ಹುಸೇನ್ ಎಂಬ ಉಗ್ರ ಅಂತ ಮುಜಾಮಿಲ್ ಶರೀಫ್ ಬಾಯ್ಬಿಟ್ಟಿದ್ದಾನೆ.
ಮುಸಾವೀರ್ ಶಾಜೀಬ್ ಹುಸೇನ್ ಕಳಸ ಮೂಲದವನು. ಈತ ಬೆಂಗಳೂರಲ್ಲಿರೋ ಚಿಕನ್ ಕೌಂಟಿಯಲ್ಲಿ ಕೆಲಸ ಮಾಡ್ತಿದ್ದ. ಚಿಕ್ಕಮಗಳೂರಿನಲ್ಲಿ ವರ್ಷದಿಂದ ತಾಯಿ ಮತ್ತು ತಂಗಿ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದ. ಮುಜಾವೀರ್ ಪತ್ನಿ ಗರ್ಭಿಣಿ ಆಗಿದ್ದು, ಆಕೆ ಮಂಗಳೂರಲ್ಲಿ ನೆಲೆಸಿದ್ದಾಳೆ. ದಾಳಿ ವೇಳೆ ಉಗ್ರನ ತಾಯಿಯ ಮೊಬೈಲ್ಅನ್ನ ಎನ್ಐಎ ವಶಕ್ಕೆ ಪಡೆದಿದೆ. ಮುಸಾವೀರ್ ಹಾಗೂ ಅಬ್ದುಲ್ ಮತೀನ್ ತಾಹಾ ಸೇರಿ ಬ್ಲಾಸ್ಟ್ಗೆ ಸಂಚು ರೂಪಿಸಿದ್ದಾರೆಂಬ ಮಾಹಿತಿ ಬಹಿರಂಗವಾಗಿದೆ.
ಇನ್ನು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಅಬ್ದುಲ್ ಮತೀನ್ ತಾಹಾ ಅಲ್ ಹಿಂದ್ ಸಂಘಟನೆಯ ಪ್ರಮುಖ ಸದಸ್ಯ ಎಂಬುದು ತಿಳಿದು ಬಂದಿದೆ.ಅಲ್ದೇ ಮಂಗಳೂರು ಕುಕ್ಕರ್ ಬ್ಲಾಸ್ಟ್ ಆರೋಪಿಗೂ ಈತನೇ ಗೈಡ್ ಆಗಿದ್ದ ಎಂಬುದು ತಿಳಿದು ಬಂದೆ.