ಹುಲಸೂರ: ಇಲ್ಲಿನ ಮಹಿಳಾ ಕಿಸಾನ್ ಸಿರಿಧಾನ್ಯ ಉತ್ಪಾದಕರ ಸಂಸ್ಥೆಗೆ ಬುಧವಾರ 17 ದೇಶಗಳ ಪ್ರತಿನಿಧಿಗಳು ಭೇಟಿ ನೀಡಿ ಉತ್ಪಾದನೆ, ಸಂಸ್ಕರಣೆ ಹಾಗೂ ಮಾರಾಟ ಕುರಿತು ಮಾಹಿತಿ ಪಡೆದರು.
ಈ ಸಂಸ್ಥೆಯ ಕುರಿತು ಈಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದರು. ಆಫ್ರಿಕಾ, ನೈಜೀರಿಯಾ, ಸುಡಾನ್, ಬಾಂಗ್ಲಾದೇಶ, ಉಗಾಂಡ, ಜಾಂಬಿಯಾ ಸೇರಿ ವಿವಿಧ ದೇಶಗಳ ಪ್ರತಿನಿಧಿಗಳು ತಂಡದಲ್ಲಿದ್ದರು. ಈ ಸಂದರ್ಭದಲ್ಲಿ ಸಂಸ್ಥೆ ಅಧ್ಯಕ್ಷೆ ಅಂಬಿಕಾ ಮೇತ್ರೆ, ಕೃಷಿ ಅಧಿಕಾರಿ ಮನೀಷಾ, ಸಂಗಪ್ಪ ಬಿ.ಸಿ ಅವರು ಸಿರಿಧಾನ್ಯದ ಉತ್ಪಾದನೆ ಹಾಗೂ ಸಂಸ್ಥೆ ಕುರಿತು ಮಾಹಿತಿ ನೀಡಿದರು. ನಂತರ ತಂಡದ ಸದಸ್ಯರನ್ನು ಸನ್ಮಾನಿಸಲಾಯಿತು.
ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ ಭೂಸಾರೆ, ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ಮಲ್ಲಪ್ಪ ಧಬಾಲೆ, ಶಿವಾಜಿ ಮೋರೆ, ಪ್ರಗತಿಪರ ರೈತರು ಹಾಗೂ ಗಣ್ಯರು ಇದ್ದರು.