News Karnataka Kannada
Friday, May 17 2024
ಬೀದರ್

ಉಳ್ಳಾಗಡ್ಡಿ ದರ ದಿಢೀರ್‌ ಏರಿಕೆ: ಕೆ.ಜಿಗೆ ₹60ರಿಂದ ₹80ಕ್ಕೆ ಹೆಚ್ಚಳ

Export ban on pink onions lifted
Photo Credit : News Kannada

ಬೀದರ್: ಉಳ್ಳಾಗಡ್ಡಿ ಬೆಲೆ ದಿಢೀರ್‌ನೆ ಭಾರಿ ಏರಿಕೆ ಕಂಡಿದ್ದು, ಗ್ರಾಹಕರಿಗೆ ಕಣ್ಣೀರು ತರಿಸುತ್ತಿದೆ. ವಾರದ ಹಿಂದೆ ಪ್ರತಿ ಕೆ.ಜಿ. ಮಧ್ಯಮ ಗಾತ್ರದ ಈರುಳ್ಳಿ ₹20ರಿಂದ ₹30ಕ್ಕೆ ಮಾರಾಟವಾಗುತ್ತಿತ್ತು. ಈಗ ಅದು ₹50ರಿಂದ ₹60ಕ್ಕೆ ಹೆಚ್ಚಳವಾಗಿದೆ. ದೊಡ್ಡ ಗಾತ್ರದ ಉಳ್ಳಾಗಡ್ಡಿ ಬೆಲೆ ₹40ರಿಂದ ₹50 ಇತ್ತು. ಅದೀಗ ₹75ರಿಂದ ₹80ಕ್ಕೆ ಏರಿಕೆ ಕಂಡಿದೆ.

ಸ್ಥಳೀಯ ಹಾಗೂ ರಾಜ್ಯದ ಚಿತ್ರದುರ್ಗ ಸೇರಿದಂತೆ ಇತರೆ ಕಡೆಗಳಲ್ಲಿ ಬೆಳೆಯಲಾಗುವ ಈರುಳ್ಳಿ ಮಾರ್ಚ್‌-ಏಪ್ರಿಲ್‌ನಲ್ಲಿ ಮಾರುಕಟ್ಟೆಗೆ ಬರುತ್ತದೆ. ಸದ್ಯ ಜಿಲ್ಲೆಗೆ ಮಹಾರಾಷ್ಟ್ರದ ಪುಣೆ, ಸೊಲ್ಲಾಪುರ, ಕೊಲ್ಲಾಪುರದಿಂದ ಹೆಚ್ಚಾಗಿ ಈರುಳ್ಳಿ ಬರುತ್ತಿದೆ. ಆದರೆ, ಈ ವರ್ಷ ಅಲ್ಲಿ ಹೆಚ್ಚಿನ ಫಸಲು ಬಂದಿಲ್ಲ. ಈಗ ಕಡಿಮೆ ದಾಸ್ತಾನು ಇದ್ದು, ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಕಡಿಮೆ ಮಾಲಿಗೆ ವಿವಿಧ ಕಡೆಗಳಿಂದ ದೊಡ್ಡ ಮಟ್ಟದಲ್ಲಿ ಬೇಡಿಕೆ ಉಂಟಾಗಿದ್ದು, ಸಹಜವಾಗಿಯೇ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

‘ಈ ಸಾಲ ರಾಜ್ಯದಲ್ಲಿ ಈರುಳ್ಳಿ ಬಿತ್ತನೆ ಬಹಳ ಕಡಿಮೆ ಆಗಿದೆ. ಕಳೆದ ವರ್ಷ ಭಾರಿ ಮಳೆಗೆ ಕೊಳೆ ರೋಗ ಬಂದು ಈರುಳ್ಳಿ ಬೆಳೆಗಾರರು ತೀವ್ರ ನಷ್ಟ ಅನುಭವಿಸಿದ್ದರು. ಈ ಸಲವೂ ಅದೇ ರೀತಿ ಮಳೆ ಬರಬಹುದು ಎಂದು ರೈತರು ಹೆಚ್ಚಾಗಿ ಉಳ್ಳಾಗಡ್ಡಿ ಬೆಳೆದಿಲ್ಲ. ರಾಜ್ಯದಲ್ಲಿ ಮಾಲು ಬಹಳ ಕಡಿಮೆ ಇದೆ. ಮಹಾರಾಷ್ಟ್ರದಲ್ಲೂ ಬೇಡಿಕೆ ಹೆಚ್ಚಾಗಿದ್ದು ಬೆಲೆ ಏರಿಕೆಗೆ ಕಾರಣವಾಗಿದೆ’ ಎಂದು ಈರುಳ್ಳಿ ಬೆಳೆಗಾರರ ಸಂಘದ ಸದಸ್ಯ ಎನ್.ಎಂ. ಸಿದ್ದಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಉತ್ತಮ ಗುಣಮಟ್ಟದ ಪ್ರತಿ ಕ್ವಿಂಟಾಲ್‌ ಈರುಳ್ಳಿ ಬೆಲೆ ₹6000ಕ್ಕೆ ಏರಿಕೆಯಾಗಿದೆ. ಹಿಂದೆ ₹3,500ರಿಂದ ₹4,000 ಇತ್ತು. ಮಾಲು ಬಹಳ ಕಡಿಮೆ ಇದೆ. ಬೇಡಿಕ್ಕೆ ಹೆಚ್ಚಾಗಿದೆ. ಇದರಿಂದಾಗಿ ಬೆಲೆ ಹೆಚ್ಚಳವಾಗಿದೆ. ಈ ವರ್ಷಾಂತ್ಯದ ವರೆಗೆ ಇದೇ ರೀತಿ ಬೆಲೆ ಇರಲಿದೆ’ ಎಂದು ಈರುಳ್ಳಿ ವ್ಯಾಪಾರಿ ಸಾಜೀದ್‌ ಹೇಳಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಸ್ಥಳೀಯವಾಗಿ ಬೆಳೆದ ಈರುಳ್ಳಿ ಮಾರುಕಟ್ಟೆಗೆ ಬರುತ್ತಿತ್ತು. ಆಗ ಪ್ರತಿ ಕೆ.ಜಿ ಈರುಳ್ಳಿ ₹10ರಿಂದ ₹15ಕ್ಕೆ ಮಾರಾಟವಾಗುತ್ತಿತ್ತು. ಈ ಸಲ ಬೆಳೆ ಹೆಚ್ಚಾಗಿ ಬೆಳೆಯದ ಕಾರಣ ಮಾರುಕಟ್ಟೆಗೆ ಬರುವುದಿಲ್ಲ. ಬೆಲೆಯೂ ಕೂಡ ಈಗಿನಂತೆ ಸ್ಥಿರವಾಗಿರಲಿದೆ’ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು