ಹುಮನಾಬಾದ : ಚುನಾವಣೆ ದೃಷ್ಟಿಯಲ್ಲಿಟ್ಟು ಕೊಂಡು ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಅವರು ಮಹಿಳೆಯರಿಗೆ ಕುಕ್ಕರ್ ಆಮಿಷ ತೋರಿಸಿ ಮತ ಎಳೆಯುವ ತಂತ್ರಗಾರಿಕೆ ಮಾಡಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಸಿ.ಎಂ.ಫೈಜ್ ಆರೋಪಿಸಿದರು.
ಮಾರ್ಚ್ 5 ರಂದು ಶಾಸಕರ ಸುಪುತ್ರನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಗಿಫ್ಟ್ ಕೊಡುವಂತ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಪುರುಷರು ಸೇರಿಕೊಂಡಿದ್ದರು. ಪಟ್ಟಣದ ಹೊರವಲಯದ ರಾಜರಾಜೇಶ್ವರಿ ಮೈದಾನದಲ್ಲಿ.
ಇದೇ ವೇಳೆ ಗಿಫ್ಟ್ಗಾಗಿ ನೂಕುನುಗ್ಗಲು ಉಂಟಾಗಿ ಇಬ್ಬರು ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಕಾರ್ಯಕ್ರಮ ಆಯೋಜನೆ ಮಾಡಲು ಅನುಮತಿ ಪಡೆಯಲಾಗಿದೆಯೇ ? ಮಹಿಳೆಯರ ಸುರಕ್ಷೆಗೆ ಯಾವ ಕ್ರಮ ಕೈಗೊಳ್ಳಲಾಗಿತ್ತು .?ಅವು ಐಎಸ್ಐ ಮಾರ್ಕ್ ಇರುವ ಕುಕ್ಕರ್ ಇವೆಯಾ ? ಯಾವ ಕಂಪನಿಯದು ? ಎಂದು ಕೇಳಲು ಬಯಸುತ್ತೇನೆ . ಎಂದರು .
ಇಬ್ಬರು ಮಹಿಳೆಯರಿಗೆ ಗಾಯವಾಗಿದ್ದು ಅವರ ಆಸ್ಪತ್ರೆಯ ಖರ್ಚುಗಳು ಯಾರು ನೀಡುವರು ಎಂದು ಪ್ರಶ್ನಿಸಿದ ಅವರು ಜನರ ಮೇಲೆ ಅಷ್ಟು ಪ್ರೀತಿಯ ಇದ್ದರೆ ಅವರ ಮನೆಗೆ ಕುಕ್ಕರ್ ತಲುಪಿಸಬೇಕಾಗಿತ್ತು. ಶಾಸಕರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಡಿಸಿಸಿ ಬ್ಯಾಂಕಿಂದ 1 ಲಕ್ಷ ಸಾಲ ಮನ್ನಾ ಮಾಡಿಸಲಿ ಎಂದು ಹೇಳಿದರು .
ಒಟ್ಟಾರೆಯಾಗಿ ಹಂಚಲು ಎಂಬುದು ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎ.ಎಮ್. ಕುಲಕರ್ಣಿ, ಶಿವರಾಜ ಹುಲಿ, ಬಾಬು ಬುಕಾರಿ, ಶಿವಪುತ್ರ ಮಾಳಿಗೆ ಇದ್ದರು.