News Karnataka Kannada
Sunday, May 12 2024
ಬೀದರ್

ಕ್ಷೇತ್ರದ ಅಭಿವೃದ್ಧಿಗೆ ಹೊಸಮುನ್ನುಡಿ ಬರೆಯೋಣ: ರವೀಂದ್ರ ಸ್ವಾಮಿ

Let's write a new book for the development of the constituency: Ravindra Swamy
Photo Credit : News Kannada

ಔರಾದ : ಜನಸೇವೆ ಮಾಡುವುದೇ ನನ್ನ ಪರಮ ಗುರಿಯಾಗಿದೆ. ನಿಮ್ಮ ತಾಲೂಕಿನ ಮನೆ ಮಗನಾದ ನನಗೆ ಕ್ಷೇತ್ರದ ಜನತೆ ಒಮ್ಮೆ ಆಶೀರ್ವಾದ ಮಾಡಬೇಕೆಂದು ರವೀಂದ್ರ ಸ್ವಾಮಿ ಮನವಿ ಮಾಡಿದರು.

ಔರಾದ ತಾಲೂಕಿನ ನಾಗೂರಾ ಬಿ. ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿಯೇ ಔರಾದ ತಾಲೂಕು ಅತ್ಯಂತ ಹಿಂದುಳಿದಿದೆ. 15 ವರ್ಷ ಆಡಳಿತ ಮಾಡಿದವರು ತಾಲೂಕನ್ನು ಅಭಿವೃದ್ಧಿ ಮಾಡುವ ಗೋಜಿಗೆ ಹೋಗಲಿಲ್ಲ. ಇನ್ನು ಮುಂದೆಯಾದರೂ ತಾಲೂಕಿನ ಜನತೆ ಎಚ್ಚೆತ್ತುಕೊಂಡು ಕ್ಷೇತ್ರದ ಅಭಿವೃದ್ಧಿಗಾಗಿ ನನಗೆ ಕೈಜೋಡಿಸಬೇಕಾಗಿದೆ. ತಾಲೂಕಿನಲ್ಲಿ ಒಂದು ಹೊಸ ವಿಚಾರಗಳೊಂದಿಗೆ ಅಭಿವೃದ್ಧಿಯ ಕುರಿತು ಚರ್ಚಿಸೋಣ, ಐಕ್ಯತೆ ಯಿಂದ ಹೋರಾಟ ಮಾಡೋಣ ಎಂದು ತಿಳಿಸಿದರು.

ಏಪ್ರಿಲ್ 19 ರಂದು ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ. ತಾಲೂಕಿನ ಜನತೆ ಸಹಸ್ರಾರು ಸಂಖ್ಯೆಯಲ್ಲಿ ಬಂದು ನನ್ನನ್ನು ಆಶೀರ್ವದಿಸಬೇಕು ಜನರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಉಮೇಶ ರೆಡ್ಡಿ, ಉಮಾಕಾಂತ ದೇಶಮುಖ, ಸತೀಶ ದೇಶಮುಖ, ನೀಲಕಂಠ ಮಸ್ಕಲೆ, ಸೋಮನಾಥ ದೇಶಮುಖ, ಸಂಗಪ ಮಸ್ಕಲೆ, ಸಂತೋಷ ಬಿರಾದಾರ, ಸಂಜೀವಕುಮಾರ ಅಷ್ಟೂರೆ, ಅಮೃತ ಮಸ್ಕಲೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು