ಬೀದರ್: ಕೈ ಅಭ್ಯರ್ಥಿ ಸಾಗರ್ ಖಂಡ್ರೆ ವಕೀಲ ಆಗದೇ ಇದ್ರೂ ವಕೀಲ ಅಂತಾ ಹೇಳಿಕೊಂಡಿದ್ದಾರೆ ಎಂಬ ಖೂಬಾ ಹೇಳಿಕೆಗೆ ‘ನನ್ನ ಕಡೆ ಎಲ್ಲಾ ದಾಖಲೆಗಳು ಇವೆ ಮುಂದಿನ ದಿನಗಳಲ್ಲಿ ಎಲ್ಲಾ ದಾಖಲೆಗಳನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿ ಬಿಡುಗಡೆ ಮಾಡ್ತೇನೆ ಅಂತಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಾಗರ್ ಖಂಡ್ರೆ ಹೇಳಿದ್ದರು.
ಈಗ ಸಾಗರ್ ಖಂಡ್ರೆ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ, ಹೈಕೋರ್ಟ್, ಸುಪ್ರೀಂ ಕೋರ್ಟ್ ಪ್ರ್ಯಾಕ್ಟೀಸ್ ಮಾಡಿದ್ದೇನೆ ಅಂತಾ ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ.
ಪ್ರ್ಯಾಕ್ಟೀಸ್ ಮಾಡಲು ಎಐಬಿಇ ಮತ್ತು ಸಿಓಪಿ ತೇರ್ಗಡೇ ಆಗಬೇಕು. ಆದ್ರೆ ಅವರೂ, ಯಾವುದನ್ನು ಪಾಸ್ ಆಗದೇ ವಕೀಲನಾಗಿದ್ದೇನೆ ಅಂತಾ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಕನಿಷ್ಟ 6-7 ತಿಂಗಳು ಪ್ರ್ಯಾಕ್ಟೀಸ್ ಮಾಡಬೇಕು. ಏನೂ ಮಾಡದೇ ವಕೀಲ ಅಂತಾ ಹೇಳ್ತಿದ್ದಾರೇ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಕಿಡಕಾರಿದ್ರು.
ಯಾವುದೇ ವಕಾಲತ್ತು ಮಾಡದೇ, ಸಮಾಜಸೇವೆ ಮಾಡದೇ ಆದಾಯದ ಮೂಲ ತೋರಿಸಿದ್ದಾರೆ. ತಂದೆಗಿಂತ ಹೆಚ್ಚು ಸುಳ್ಳು ಹೇಳುವ ಕೆಲಸವನ್ನ ಸಾಗರ್ ಖಂಡ್ರೆ ಮಾಡುತ್ತಿದ್ದು, ಜನರಿಗೆ ದಾರ ತಪ್ಪಿಸಿ ಬುರುಡೆ ಬಿಡುವ ಕೆಲಸ ಮಾಡ್ತಾ ಇದ್ದಾರೆ.
ಖಂಡ್ರೆ ಪರಿವಾರದ ವಿರುದ್ದ ಮಾತನಾಡಿದ್ದಕ್ಕೆ ಮಾನನಷ್ಟ ಮೊಕದ್ದಮೆ ಹಾಕ್ತೇನೆ ಎಂಬ ಈಶ್ವರ ಖಂಡ್ರೆ ಹೇಳಿಕೆಗೆ ತಿರುಗೇಟು ನೀಡಿ, ಇವತ್ತೇ ಒಳ್ಳೆಯ ದಿನವಿದೆ. ಇಂದೇ ಹಾಕೋಕೆ ಹೇಳಿ ಎಂದು ಖಂಡ್ರೆ ಹೇಳಿಕೆಗೆ ವ್ಯಂಗ್ಯವಾಡಿದ್ರು.