News Karnataka Kannada
Sunday, April 28 2024
ಬೀದರ್

ಏ.14ರಂದು ಮೂಲನಿವಾಸಿ ಫೌಂಡೇಶನ್‌ ಅಸ್ತಿತ್ವಕ್ಕೆ

'ದಲಿತ ಸಮದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಬರುವ ಏಪ್ರಿಲ್‌ 14ರಂದು 'ನಮ್ಮ ಮೂಲನಿವಾಸಿ ಫೌಂಡೇಷನ್‌' ಸಂಸ್ಥೆ ಹುಟ್ಟು ಹಾಕಲಾಗುತ್ತಿದೆ' ಎಂದು ಮುಖಂಡರಾದ ವೈಜಿನಾಥ ಸೂರ್ಯವಂಶಿ, ವಿಠ್ಠಲದಾಸ ಪ್ಯಾಗೆ ತಿಳಿಸಿದರು.
Photo Credit : NewsKarnataka

ಬೀದರ್: ‘ದಲಿತ ಸಮದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಬರುವ ಏಪ್ರಿಲ್‌ 14ರಂದು ‘ನಮ್ಮ ಮೂಲನಿವಾಸಿ ಫೌಂಡೇಷನ್‌’ ಸಂಸ್ಥೆ ಹುಟ್ಟು ಹಾಕಲಾಗುತ್ತಿದೆ’ ಎಂದು ಮುಖಂಡರಾದ ವೈಜಿನಾಥ ಸೂರ್ಯವಂಶಿ, ವಿಠ್ಠಲದಾಸ ಪ್ಯಾಗೆ ತಿಳಿಸಿದರು.

ನಗರದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏ.14ರಂದು ಬಾಬಾ ಸಾಹೇಬ್ ಅಂಬೇಡ್ಕರ್‌ ಅವರ ಜಯಂತಿ ಉತ್ಸವದ ದಿನವೇ ಫೌಂಡೇಷನ್‌ ಆರಂಭಿಸಲಾಗುವುದು. ಮೌಲ್ಯಾಧಾರಿತ, ರಚನಾತ್ಮಕ, ಧನಾತ್ಮಕ ಹಾಗೂ ಕ್ರಿಯಾಶೀಲ ಚಟುವಟಿಕೆಗಳನ್ನು ಆಯೋಜಿಸಿ ಸಮಾಜಕ್ಕೆ ಸಕಾರಾತ್ಮಕ ಸಂದೇಶ ಕೊಡಲು ಪ್ರಯತ್ನಿಸಲಾಗುವುದು’ ಎಂದರು.

‘ಸಂಸ್ಥೆಯ ಚಟುವಟಿಕೆಗಳು ಏ. 2ರಂದೇ ಆರಂಭವಾಗಲಿದೆ. ಏ. 2ರಿಂದ 7ರವರೆಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜಿಸಲಾಗುವುದು. ಕುಸ್ತಿ, ಕಬಡ್ಡಿ, ಅಥ್ಲೆಟಿಕ್ಸ್, ವಾಲಿಬಾಲ್ ಹಾಗೂ ಕ್ರಿಕೆಟ್ ಟೂರ್ನಿ ಹಮ್ಮಿಕೊಳ್ಳಲಾಗುವುದು.

ಇದರ ಮೂಲಕ ಪ್ರತಿಭೆಗಳನ್ನು ಗುರುತಿಸಲಾಗುವುದು. ತಂಡಗಳನ್ನು ಮಾಡಿ ಎಲ್ಲ ತಾಲ್ಲೂಕುಗಳಲ್ಲಿ ಪ್ರಚಾರ ಕೈಗೊಳ್ಳಲಾಗುವುದು. ಎಲ್ಲ ಗ್ರಾಮಗಳಿಗೆ ಹೋಗಿ ಅಂಬೇಡ್ಕರ್‌ ಭವನ, ಬುದ್ಧ ವಿಹಾರಗಳನ್ನು ಸ್ವಚ್ಛಗೊಳಿಸಲಾಗುವುದು. ಬುದ್ಧ, ಬಸವ, ಅಂಬೇಡ್ಕರ್‌ ಸದಾಶಯಗಳನ್ನು ಮನೆ ಮನೆಗೆ ತಲುಪಿಸಲಾಗುವುದು’ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು