News Karnataka Kannada
Thursday, May 02 2024
ಬೀದರ್

ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗೆ ಮಾಳೆಗಾಂವ್ ತಾಂಡಾದಲ್ಲಿ ಬೆದರಿಕೆ: ಪ್ರಕರಣ ದಾಖಲು

Jd(S) probable candidate threatened in Malegaon Tanda, case registered
Photo Credit : News Kannada

ಔರಾದ : ಔರಾದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಸಂಭಾವ್ಯ ಅಭ್ಯರ್ಥಿ ಸೇರಿದಂತೆ ಕಾರ್ಯಕರ್ತರಿಗೆ ಅಕ್ರಮವಾಗಿ ತಡೆದು, ಅವ್ಯಾಚ್ಛ ಶಬ್ದಗಳಿಂದ ನಿಂದಿಸಿ ಪಕ್ಷದ ಧ್ವಜ ಸುಟ್ಟ ಘಟನೆ ತಾಲೂಕಿನ ಮಾಳೆಗಾಂವ ತಾಂಡಾದಲ್ಲಿ ಜರುಗಿದೆ.

ಘಟನಾ ಸಂಬಂಧಿಸಿದಂತೆ ಜೆಡಿಎಸ್ ಕಾರ್ಯಕರ್ತ ಅನೀಲ್ ಅವರು ಹೊಕ್ರಾಣಾ ಪೊಲೀಸ್ ಠಾಣೆಗೆ ದುರು ನೀಡಿದ್ದಾರೆ. ಮಾಳೆಗಾಂವ ತಾಂಡಾದ ವಿಕಾಸ್, ಪ್ರೇಮ್ ದಾಸ್ ರಾಠೋಡ್ , ಪವನ್, ವಸಂತ, ವಿಜಯ್ ಕುಮಾರ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಜೆಡಿಎಸ್ ಎಮ್ ಎಲ್ ಏ ಟಿಕೇಟ್ ಆಕಾಂಕ್ಷಿ ಜೈಸಿಂಗ್ ರಾಠೋಡ್ ಹಾಗೂ ಜೆಡಿಎಸ್ ಕಾರ್ಯಕರ್ತರು ಮಾಳೆಗಾಂವ ತಾಂಡಾಕ್ಕೆ ಜನರ ಸಮಸ್ಯೆ ಆಲಿಸಲು ಹೋದಾಗ ಆರೋಪಿಗಳು ವಾಹನಗಳನ್ನು ಅಕ್ರಮವಾಗಿ ತಡೆದು ಮೋದಿ ಮೋದಿ ಎಂದು ಘೋಷಣೆಗಳನ್ನು ಕೂಗಿದ್ದಾರೆ ಹಾಗೂ ಪ್ರಭು ಚೌಹಾಣ್ ಗೆ ಜಯವಾಗಲಿ ಎಂದು ಕೂಗಿ ಅವ್ಯಾಚ್ಚವಾಗಿ ನಿಂದಿಸಿದ್ದಾರೆ. ಬಳಿಕ ಜೆಡಿಎಸ್ ಪಕ್ಷದ ಧ್ವಜವನ್ನು ಸುಟ್ಟುಹಕಿದ್ದಾರೆ ಎಂದು ದುರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ಮುಂದು ವರೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು