ಹುಮನಾಬಾದ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹುಮನಾಬಾದ ವತಿಯಿಂದ ಇಂದು ವಿಶ್ವ ಪರಿಸರ ದಿನಾಚರಣೆ, ಹುಡಗಿ ಗ್ರಾಮದ ಸರಕಾರಿ ಕನ್ಯಾ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮರ ನೆಡುವದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನಿಡಿಲಾಯಿತು.
ಕರ್ಯಕ್ರಮ ಉದ್ದೇಶಿಸಿ ತಾಲೂಕು ಕಸಾಪ ಅಧ್ಯಕ್ಷರಾದ ಸಿದ್ದಲಿಂಗ ವಿ ನಿರ್ಣಾ ಮಾತನಾಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯ, ಸಂಸ್ಕೃತಿ, ಕಲೆ,ಸಂಗೀತ , ಅಷ್ಟೇ ಅಲ್ಲದೆ ಅನೇಕ ಸಮಾಜ ಕಳಕಳಿ ಹಾಗೂ ಜಾಗೃತಿ ಕಾರ್ಯಕ್ರಮವನ್ನು ಸಹ ಪರಿಷತ್ತು ನಿರಂತರವಾಗಿ ನೆರವೇರಿಸಿಕೊಂಡು ಬರುತ್ತಿದೆ ಅದರಲ್ಲಿ ವಿಶೇಷವಾಗಿ ಇಂದು ಪರಿಸರ ದಿನ ಆಗಿರೋದ್ರಿಂದ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ,ವಿಶೇಷವಾಗಿ ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಿ ಶಾಲೆಗಳಲ್ಲಿ ಶಾಲೆಗೊಂದು ಮರ ಅನ್ನುವ ಘೋಷಣೆಯೊಂದಿಗೆ ಪ್ರತಿಯೊಂದು ಸರಕಾರಿ ಶಾಲೆಗಳಲ್ಲಿ ಒಂದೊಂದು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದೆ, ಹೀಗಾಗಿ ಪರಿಷತ್ತಿನ ನಿರಂತರ ಕಾರ್ಯಕ್ರಮಕ್ಕೆ ತಮ್ಮೆಲ್ಲರ ಸಹಕಾರ ಇರಲಿ ಎಂದು ತಿಳಿಸಿದರು.
ಕಾರ್ಯಕ್ರಮ ಕುರಿತು ತಾಲ್ಲೂಕು ಕಸಾಪ ಕೋಶ್ಯಾಧ್ಯಕ್ಷರಾದ ಮಾಣಿಕಪ್ಪ ಬಕ್ಕನ ಮಾತನಾಡಿ ಸಾಹಿತ್ಯ ಪರಿಷತ್ತು ಸಾಹಿತಿಕವಗಿ ತನ್ನ ಕಾರ್ಯಕ್ರಮ ಆಯೋಜಿಸುವದರ ಜೊತೆಯಲ್ಲಿ ಸಮಾಜಿಕ ಕಳಕಳಿ ಹಾಗೂ ಜನಹಿತಪರ ಕಾರ್ಯ ಸಹ ನಿರಂತರ ಮಾಡಿಕೊಂಡು ಬರುತ್ತಿದೆ ವಿಶೇಷವಾಗಿ ಪರಿಸರ ಕಾಳಜಿ ನಮ್ಮ ಹೋಣೆ ಹೀಗಾಗಿ ಮರ ನೆಡುವ ಕಾರ್ಯ ಸಹ ನಾಗರಿಕರ ಆದ್ಯ ಕರ್ತವ್ಯ ಎಂದು ನುಡಿದರು.
ಅದರಂತೆ ಮುಖ್ಯ ಅತಿಥಿಗಳಾದ ಮಲ್ಲಿಕಾರ್ಜುನ ಸಂಗಮಕರ ಮಾತನಾಡಿ ಮನುಷ್ಯನಿಗೆ ಅತ್ಯಂತ ಅವಶ್ಯಕತೆ ಇರುವ ಗಾಳಿ ನಮ್ಮ ಪರಿಸರದಿಂದ ಸಿಗುವ ಸಂಜೀವಿನಿ ನಮ್ಮ ಮನೆ ಪರಿಸರದಲ್ಲಿ ಮರ ಗಿಡ ಬೆಳೆಸೋಣ,ಆರೋಗ್ಯಕ್ಕೆ ಹಾನಿಕಾರಕ ವಾದ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸೊಣ ಎಂದು ನುಡಿದರು, ಕಾರ್ಯಕ್ರಮದ ಅಧ್ಯಕ್ಷತೆ ಲಲಿತಾಬಾಯಿ ಮುಖ್ಯ ಗುರುಗಳು ವಹಿಸಿಕೊಂಡು ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ವಿಶೇಷವಾಗಿ ಸರಕಾರಿ ಶಾಲೆಗಳಲ್ಲಿ ಪರಿಸರ ದಿನಾಚರಣೆ ಆಚರಣೆ ಹಾಗೂ ಮರ ನೆಡುವ ಕಾರ್ಯಕ್ರಮ ಹಮ್ಮಿಕೊಂಡು ಉತ್ತಮ ಸಂದೇಶ ಸಮಾಜಕ್ಕೆ ನೀಡುತ್ತಿದ್ದಾರೆ.
ಇವರ ಕಾರ್ಯ ನಿರಂತರ ಸಾಗಲಿ ಎಂದು ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ,ಗುರುಲಿಂಗಯ್ಯ ಮದರಗಾವ, ವೀರೇಶ ಬಾವಗೆ,ಸುಗಂಧ,ಗಂಗಾಬಯಿ,ಕಮಲಾ, ಅನ್ನಪೂರ್ಣ,ತೇಜಮ್ಮ, ಗಿರಿಜಾ, ಕಾರ್ಯಕ್ರಮವನ್ನು ಶಾಲೆಯ ಹಿರಿಯ ಗುರುಗಳಾದ ಶ್ರೀಧರ ಚೌಹಾಣ್ ಸ್ವಗತಿಸಿ ನಿರ್ವಹಿದರು , ಸುಪ್ರೀಯಾ ವಂದಸಿದರು ಕಾರ್ಯಕ್ರಮದಲ್ಲಿ ಅನೇಕ ಗ್ರಾಮದ ಪ್ರಮುಖರು ಮಕ್ಕಳು ಭಾಗವಹಿಸಿದರು