ಹುಮನಾಬಾದ್: ಹುಮನಾಬಾದ ಕ್ಷೇತ್ರದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ದರ್ಶನ್ ಪಡೆದುಕೊಳ್ಳಲು ಆಗಮಿಸಿದ್ದ ಮಾನ್ಯ ಕೇಂದ್ರ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವಾರದ ಶ್ರೀ ಭಗವಂತ ಖುಭಾ ರವರನ್ನ ಆತ್ಮೀಯವಾಗಿ ಬರಮಾಡಿಕೊಂಡು ದೇವಾಸ್ಥಾನದ ಆಡಳಿತ ಮಂಡಳಿಯ ವತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ , ತಾಲ್ಲೂಕು ದಂಡಧಿಕಾರಿಯಾದ ಶ್ರೀ ಪ್ರಾಧಿಪ ಕುಮಾರ ಹಿರೇಮಠ , ಹುಮನಾಬಾದ ಬಿ.ಜೆ.ಪಿ ಮಂಡಲದ ಅಧ್ಯಕ್ಷರಾದ ಪ್ರಭಾಕರ ನಾಗರಳೆ , ನಗರ ಅಧ್ಯಕ್ಷರಾದ ಗಿರೀಶ್ ಪಾಟೀಲ , ಯುವ ಮುಖಂಡರು ಮಾಜಿ ಎಪಿ.ಎಂ.ಸಿ ಅಧ್ಯಕ್ಷರಾದ ಡಾ. ಭದ್ರೇಶ ಪಾಟೀಲ , ವೈಜಿನಾಥ ಪಾಟೀಲ ಧೂಮಾನಸುರ , ಪಕ್ಷದ ಮುಖಂಡರಾದ ನಾಗಭೂಷಣ ಸಂಗಮ , ಶ್ರೀನಾಥ ದೇವಣಿ , ಗಿರೀಶ ತುಂಬಾ , ಗೋಪಿನಾಥ ಮೊಹಾಳೆ ಹಾಗೂ ದೇವಾಸ್ಥಾನದ ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.