ಹುಮನಾಬಾದ್: ತಾಲ್ಲೂಕಿನ ಜಲಸಂಗಿ ಗ್ರಾಮದ ಯುವಕರು ಕಾಂಗ್ರೆಸ್ ತೊರೆದು ಡಾ.ಸಿದ್ದು ಪಾಟೀಲ ಸಮ್ಮುಖದಲ್ಲಿ ಬಿಜೆಪಿ ಸೇರಿದರು.
ನಂತರ ಡಾ.ಸಿದ್ದು ಪಾಟೀಲ ಮಾತನಾಡಿ,’ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿವೆ. ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿವೆ. ಇದನ್ನು ನೋಡಿ ಅನೇಕರು ಬಿಜೆಪಿ ಸೇರುತ್ತಿದ್ದಾರೆ’ ಎಂದರು.
ಈ ಸಂದರ್ಭದಲ್ಲಿ ಅನಿಲ್ ಎಡಬಾಳೆ, ಉಮೇಶ ವಗ್ಗಿ, ಬಂಡೆಪ್ಪ ಮಡಿವಾಳ, ಸಚಿನ್ ವಾರೀಕ, ಸುನೀಲ ತೆಲಂಗ್, ಏಕನಾತ ಬಿರಾದಾರ, ವಿನೋದ ಕಂದಗೂಳೆ ಹಾಗೂ ಮಾರುತಿ ಗೌಳಿ ಇದ್ದರು.