ಹುಮನಾಬಾದ್: ‘ಬಸವಣ್ಣನವರು 12ನೇ ಶತಮಾನದಲ್ಲಿ ಸಮಾಜದಲ್ಲಿ ಬೇರು ಬಿಟ್ಟಿದ್ದ ಮೌಢ್ಯ ತೊಲಗಿಸಲು ಶ್ರಮಿಸಿದರು’ ಎಂದು ಬಿಜೆಪಿ ಅಭ್ಯರ್ಥಿ ಡಾ.ಸಿದ್ದು ಪಾಟೀಲ ಹೇಳಿದರು.
ಪಟ್ಟಣದ ಹೊರವಲಯದ ಬಿಜೆಪಿ ಮಂಡಲ ಕಚೇರಿಯಲ್ಲಿ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾನತೆಯ ಹರಿಕಾರ ಬಸವಣ್ಣನವರ ವಿಚಾರಗಳನ್ನು ಇಂದಿನ ಎಲ್ಲ ಸಮುದಾಯದವರು ಅಳ ವಡಿಸಿಕೊಳ್ಳಬೇಕು ಎಂದರು.
ಪ್ರಸ್ತುತ ಸಮಾಜದಲ್ಲಿ ಧರ್ಮಗಳ ನಡುವೆ ಅಶಾಂತಿ ಉಂಟಾಗುತ್ತಿದೆ. ದಯವೇ ಧರ್ಮದ ಮೂಲವಯ್ಯ ಎಂಬ ಬಸವಣ್ಣನವರ ತತ್ವ ಪಾಲಿಸಿದರೆ ಸಾಮರಸ್ಯ ಮೂಡುತ್ತದೆ ಎಂದು ಹೇಳಿದರು.
ಮಾಜಿ ಶಾಸಕ ಸುಭಾಷ್ ಕಲ್ಲೂರ್, ಬಸವರಾಜ ಆರ್ಯ, ನಾಗೇಶ ಕಲ್ಲೂರ್, ಗಜೇಂದ್ರ ಕನಕಟಕರ್, ಮಲ್ಲಿಕಾರ್ಜುನ ಕುಂಬಾರ, ರವಿ ಮಾಡಗಿ, ಗಿರೀಶ ತುಂಬಾ, ಸಂತೋಷ ನವದಗಿ, ರಮೇಶ ಖೆರೋಜಿ ಹಾಗೂ ಶ್ರೀನಾಥ ದೇವಣಿ ಇದ್ದರು.