ಬೀದರ್: ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಜೆಡಿಎಸ್ ನಾಯಕರೊಂದಿಗೆ ಕೋರ್ ಕಮಿಟಿ ಸಭೆ ನಡೆಸಲು ಬೀದರ್ಗೆ ಅಗಮಿಸಿದ್ದ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾಮೋಹನ್ದಾಸ್ ಅಗರ್ವಾಲ್ ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿ, ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಕ್ಷೇತ್ರ ಗೆಲ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಪಕ್ಷದ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಸಿ, ಸುದ್ದಿಗೋಷ್ಟಿ ನಡೆಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರ್ಣಗೊಳಿಸಿದ್ರೆ 10 ಸೀಟು ಗೆಲ್ಲಲ್ಲಾ ಎಂದು ಭವಿಷ್ಯ ನುಡಿದ್ರು. ರಾಜ್ಯದಲ್ಲಿ ನಾಲ್ಕು ವರ್ಷ ಕಾಂಗ್ರೆಸ್ ಸರ್ಕಾರ ಇದ್ದರೇ ಕಾಂಗ್ರೆಸ್ ನಾಯಕರನ್ನ ಜನ ಓಡಾಡಿಸಿ ಹೊಡೆಯುತ್ತಾರೆ ಎಂದರು. ಕಳೆದ ಎರಡು ತಿಂಗಳಿಂದ ರಾಜ್ಯದಲ್ಲಿ ಪ್ರವಾಸ ಮಾಡಿದ್ದೇನೆ. ಪ್ರತಿ ಕ್ಷೇತ್ರದ ಎಲ್ಲಾ ನಾಯಕರ ಜೊತೆ ಭೇಟಿ ಮಾಡಿದ್ದೇನೆ, ನಮ್ಮ ಪಕ್ಷ ಸದೃಡವಾಗಿದೆ. ಉತ್ತರಪ್ರದೇಶಕ್ಕಿಂತ ಕರ್ನಾಟಕದಲ್ಲಿ ಹೆಚ್ಚು ಮೋದಿ ಹವಾ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಹೀನಾಯ ಸೋಲಾಗಲಿದೆ. ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದೆ ಎಂದರು.
ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ ಬಂಡಾಯ ವಿಚಾರವಾಗಿ ಮಾತನಾಡಿ, ಈಶ್ವರಪ್ಪಾ ನಾಮನೇಷನ್ ಸಲ್ಲಿಸೋದಿಲ್ಲ, ನಾಮನೇಷನ್ ಮಾಡಿದರು, ವಾಪಸ್ ಪಡೆಯುವರಿಗೆ ಕಾಯುತ್ತೆವೆ ಎಂದರು. ಬೀದರ್ ಕ್ಷೇತ್ರದಲ್ಲಿ ಯಾವುದೇ ಅಸಮಧಾನವಾಗಲಿ, ಬಂಡಾಯವಾಗಲಿ ಇಲ್ಲಾ. ಪ್ರಭು ಚವ್ಹಾಣ್ಗೆ ಹೃದಯ ಸಂಬಂಧಿ ಖಾಯಿಲೆ ಇದೆ. ಅವರ ಹೃದಯ ಪ್ರತಿ ನಿಮಿಷ್ಯಕ್ಕೆ 220 ಬಾರಿ ಹೊಡೆದುಕೊಳ್ಳುತ್ತಿದೆ.
ನಾನು ಒಬ್ಬ ವೈದ್ಯನಾಗಿದ್ದೆನೆ ಅವರ ಸ್ಥಿತಿ ಗಂಭೀರವಾಗಿದೆ. ಅವರಿಗೂ ಪ್ರಚಾರಕ್ಕೆ ಬರಬೇಕೆಂದು ಅವರ ಹೃದಯದಲ್ಲಿದೆ, ಆದರೆ ಅವರಿಗೆ ಹೃದಯದಲ್ಲೇ ಸಮಸ್ಯೆ ಇದೆ ಎಂದರು. ಸುದ್ದಿಗೋಷ್ಟಿಯಲ್ಲಿ ಜೆಡಿಎಸ್ ನಾಯಕ ಬಂಡೆಪ್ಪಾ ಖಾಶೇಂಪೂರ್, ಶಾಸಕರಾದ ಶರಣು ಸಲಗರ್, ಸಿದ್ದು ಪಾಟೀಲ್, ಶೈಲೇಂದ್ರ ಬೇಲ್ದಾಳೆ ಸೇರಿದಂತೆ ಜೆಡಿಎಸ್ ಬಿಜೆಪಿ ನಾಯಕರು ಭಾಗಿಯಾಗಿದ್ದರು.