ಬೀದರ್: ವಾಹನ ಡಿಕ್ಕಿ ಹೊಡೆದ ಪರಿಣಾಮ ರಾಷ್ಟ್ರಪಕ್ಷಿ ನವಿಲು ರಸ್ತೆಯಲ್ಲಿಯೇ ಮೃತ ಪಟ್ಟಿದೆ. ಸುದ್ದಿ ತಿಳಿದ ತಕ್ಷಣ ಪರಿಸರ ಪ್ರೇಮಿ, ಬೀದರ್ ದಕ್ಷಿಣ ಕ್ಷೇತ್ರದ ಬಿ ಎಸ್ ಪಿ ಯುವ ನಾಯಕರಾದ ಉಮೇಶ್ ಗುತ್ತೇದಾರ್ ಬಗ್ದಲ್ ಸ್ಥಳಕ್ಕೆ ಆಗಮಿಸಿ ಸತ್ತು ಬಿದ್ದ ನವಿಲನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ.
ಬೀದರ್ ಮನ್ನಾಖೆಳಿ ರಸ್ತೆಯಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ, ಆದರೂ ಸಹ ಅರಣ್ಯ ಇಲಾಖೆ ಮೈಮರೆತು ಕುಳಿತಿದೆ.
ರಸ್ತೆಯ ಎರಡೂ ಬದಿಗಳಲ್ಲಿ ಅರಣ್ಯ ಇದೆ ಹಾಗಾಗಿ ವನ್ಯ ಜೀವಿಗಳು ಓಡಾಡುವುದು ಸಾಮಾನ್ಯ.
ಅರಣ್ಯ ಇಲಾಖೆಯವರು ರಸ್ತೆ ಬದಿಯಲ್ಲಿ ಸೂಚನಾ ಫಲಕ ಅಳವಡಿಸಬೇಕು ಮತ್ತು ಅರಣ್ಯ ಅಂಚಿನಲ್ಲಿರುವ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವನ್ಯ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅರಣ್ಯ ಇಲಾಖೆ ವಿರುದ್ಧ ಉಮೇಶ್ ಗುತ್ತೇದಾರ್ ಬಗ್ದಲ್ ಆಕ್ರೋಶ ವ್ಯಕ್ತಪಡಿಸಿದರು.