News Karnataka Kannada
Sunday, May 05 2024
ಬೀದರ್

ಬೀದರ್: ಅರಣ್ಯ ಇಲಾಖೆ ವನ್ಯ ಜೀವಿಗಳ ರಕ್ಷಣೆ ಮಾಡಬೇಕು!

The forest department should protect wildlife
Photo Credit : News Kannada

ಬೀದರ್: ವಾಹನ ಡಿಕ್ಕಿ ಹೊಡೆದ ಪರಿಣಾಮ ರಾಷ್ಟ್ರಪಕ್ಷಿ ನವಿಲು ರಸ್ತೆಯಲ್ಲಿಯೇ ಮೃತ ಪಟ್ಟಿದೆ. ಸುದ್ದಿ ತಿಳಿದ ತಕ್ಷಣ ಪರಿಸರ ಪ್ರೇಮಿ, ಬೀದರ್ ದಕ್ಷಿಣ ಕ್ಷೇತ್ರದ ಬಿ ಎಸ್ ಪಿ ಯುವ ನಾಯಕರಾದ ಉಮೇಶ್ ಗುತ್ತೇದಾರ್ ಬಗ್ದಲ್ ಸ್ಥಳಕ್ಕೆ ಆಗಮಿಸಿ ಸತ್ತು ಬಿದ್ದ ನವಿಲನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ಒಪ್ಪಿಸಿದ್ದಾರೆ.

ಬೀದರ್ ಮನ್ನಾಖೆಳಿ ರಸ್ತೆಯಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ, ಆದರೂ ಸಹ ಅರಣ್ಯ ಇಲಾಖೆ ಮೈಮರೆತು ಕುಳಿತಿದೆ.

ರಸ್ತೆಯ ಎರಡೂ ಬದಿಗಳಲ್ಲಿ ಅರಣ್ಯ ಇದೆ ಹಾಗಾಗಿ ವನ್ಯ ಜೀವಿಗಳು ಓಡಾಡುವುದು ಸಾಮಾನ್ಯ.

ಅರಣ್ಯ ಇಲಾಖೆಯವರು ರಸ್ತೆ ಬದಿಯಲ್ಲಿ ಸೂಚನಾ ಫಲಕ ಅಳವಡಿಸಬೇಕು ಮತ್ತು ಅರಣ್ಯ ಅಂಚಿನಲ್ಲಿರುವ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವನ್ಯ ಪ್ರಾಣಿಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅರಣ್ಯ ಇಲಾಖೆ ವಿರುದ್ಧ ಉಮೇಶ್ ಗುತ್ತೇದಾರ್ ಬಗ್ದಲ್ ಆಕ್ರೋಶ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು