ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ್ ಬಿ. ಪಟ್ಟಣದ ಭೀಮರೆಡ್ಡಿ ಎಂಬುವವರ ಜಮೀನಿನಲ್ಲಿ ವಿದ್ಯುತ್ ಅವಘಡದಿಂದ ಬೆಂಕಿ ತಗುಲಿ ಸುಮಾರು 10 ಎಕರೆ ಕಬ್ಬು ಭಸ್ಮವಾಗಿದೆ.
‘ನಮ್ಮ ಹೊಲದಲ್ಲಿ ವಿದ್ಯುತ್ ತಂತಿಗಳು ನೆಲಕ್ಕೆ ಬಾಗಿವೆ. ಕಬ್ಬಿನ ಬೆಳೆಗೆ ತಾಗುತ್ತಿವೆ. ಹೀಗಾಗಿ ಹೊಲದಲ್ಲಿನ ಈ ವಿದ್ಯುತ್ ತಂತಿ ತೆಗೆದು ಬೇರೆ ಕಡೆ ಹಾಕುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದಾಗಿ 10 ಎಕರೆಯಲ್ಲಿ ಬೆಳೆದಿದ್ದ ₹15 ಲಕ್ಷ ಮೌಲ್ಯದ ಕಬ್ಬು ಹಾನಿ ಆಗಿದೆ’ ಎಂದು ರೈತ ಭೀಮರೆಡ್ಡಿ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಹಳ್ಳಿಖೇಡ್ ಬಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.