News Karnataka Kannada
Saturday, April 27 2024
ಬೀದರ್

ಬೀದರ್: 15 ಲಕ್ಷ ಮೌಲ್ಯದ ಕಬ್ಬು ಬೆಂಕಿಗೆ ಆಹುತಿ

Bidar: Sugarcane worth Rs 15 lakh gutted in fire
Photo Credit : News Kannada

ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ್ ಬಿ. ಪಟ್ಟಣದ ಭೀಮರೆಡ್ಡಿ ಎಂಬುವವರ ಜಮೀನಿನಲ್ಲಿ ವಿದ್ಯುತ್‌ ಅವಘಡದಿಂದ ಬೆಂಕಿ ತಗುಲಿ ಸುಮಾರು 10 ಎಕರೆ ಕಬ್ಬು ಭಸ್ಮವಾಗಿದೆ.

‘ನಮ್ಮ ಹೊಲದಲ್ಲಿ ವಿದ್ಯುತ್ ತಂತಿಗಳು ನೆಲಕ್ಕೆ ಬಾಗಿವೆ. ಕಬ್ಬಿನ ಬೆಳೆಗೆ ತಾಗುತ್ತಿವೆ. ಹೀಗಾಗಿ ಹೊಲದಲ್ಲಿನ ಈ ವಿದ್ಯುತ್ ತಂತಿ ತೆಗೆದು ಬೇರೆ ಕಡೆ ಹಾಕುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ಮಾಡಿದ್ದಾರೆ. ಇದರಿಂದಾಗಿ 10 ಎಕರೆಯಲ್ಲಿ ಬೆಳೆದಿದ್ದ ₹15 ಲಕ್ಷ ಮೌಲ್ಯದ ಕಬ್ಬು ಹಾನಿ ಆಗಿದೆ’ ಎಂದು ರೈತ ಭೀಮರೆಡ್ಡಿ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಹಳ್ಳಿಖೇಡ್ ಬಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು