ಬೀದರ: ಬೀದರ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡ ಕ್ ಯೋಜನೆ ಹಂತ-೩ ರ ಅಡಿ ಅನುಷ್ಠಾನಗೊಳಿಸುತ್ತಿರುವ ಕಾಮಗಾರಿಗಳ ಪರಿವೀಕ್ಷಣೆಗಾಗಿ ಮೇ ೧೬ ರಿಂದ ೨೦ ರವರೆಗೆ ಎನ್ಆರ್ಆರ್ಡಿಎ ಯಿಂದ ನಿಯೋಜಿತರಾದ ಕೇಂದ್ರ ಗುಣ ನಿಯಂತ್ರಣ ಪರಿವೀಕ್ಷಕರಾದ (ಎನ್.ಕ್ಯೂ.ಎಂ) ಸಕ್ಸೇನಾ ಪ್ರದಿಪಕುಮಾರ ಮತ್ತು ಬಿನೋಯ್ ಕುಮಾರ ಸಿನ್ಹಾ ಬೀದರ ಜಿಲ್ಲೆಯ ಪ್ರವಾಸ ಕೈಗೊಳ್ಳುತ್ತಿದ್ದಾರೆ.
ಅವರು ಪರಿಶೀಲಿಸಲಿರುವ ರಸ್ತೆ ಕಾಮಗಾರಿಗಳ ವಿವರ ಔರಾದನ ಟಿ-೦೧ ಮುಂಗನಾಳ ದಿಂದ ಚಿಂತಾಕಿ ರಸ್ತೆ. ಬಸವಕಲ್ಯಾಣದ ಎಂಆರ್ಎಲ್-೧೫ ಲಾಡವಂತಿ ಸ್ಟೆಟ್ ಬಾರ್ಡರ್ ವಾಯಾ ರಾಮತಿರಥ (ಡಿ) ರಸ್ತೆ. ಭಾಲ್ಕಿಯ ಎಂಆರ್ಎಲ್-೧೭ ಕಾಕನಾಳ ಎಂ.ಡಿ.ಆರ್. ವಾಯಾ ಮೆತಿಮೆಳಕುಂದಾ ರಸ್ತೆ, ಹಾಗೂ ಎಂಆರ್ಎಲ್-೨೦ ವರವಟಿ ನವದಗಿ ತಾಂಡಾ ವಾಯಾ ನವದಗಿ ರಸ್ತೆ, ಹುಮನ್ನಾಬಾದ ಎಂಅರ್ಎಲ್-೦೭ ಘಾಟಬೋರಾಳ ದಿಂದ ಸೊನಕೇರಾ ರಸ್ತೆ. ಈ ಕಾಮಗಾರಿಗಳನ್ನು ಗುಣ ನಿಯಂತ್ರಣ ಪರಿವೀಕ್ಷಕರು ಪರಿಶೀಲಿಸಲಿದ್ದಾರೆ ಎಂದು ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.