News Karnataka Kannada
Saturday, May 11 2024
ಬೀದರ್

ಬೀದರ್: ರಾಜಗೊಂಡ ಮಸಾಲೆ ವಿಶೇಷ ಅಂಚೆ ಲಕೋಟೆ ಬಿಡುಗಡೆ

Bidar: Rajagonda masala special postal envelope released
Photo Credit : News Kannada

ಬೀದರ್: ಅಂಚೆ ಇಲಾಖೆ ಹೊರ ತಂದಿರುವ ರಾಜಗೊಂಡ ಮಸಾಲೆ ವಿಶೇಷ ಅಂಚೆ ಲಕೋಟೆಯನ್ನು ಇಲಾಖೆಯ ಧಾರವಾಡ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಸುಶೀಲಕುಮಾರ ನಗರದ ಹಬ್ಸಿಕೋಟ್ ಅತಿಥಿ ಗೃಹದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದರು.

ರಾಜಗೊಂಡ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮಾಡುತ್ತಿರುವ ಕಾರ್ಯಗಳು ಮೆಚ್ಚುವಂತಹದ್ದು. ಸಿಬ್ಬಂದಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಇಲಾಖೆಯನ್ನು ಗ್ರಾಹಕರ ಬಳಿಗೆ ಕೊಂಡೊಯ್ಯಬೇಕು’ ಎಂದು ತಿಳಿಸಿದರು.

ತಹಶೀಲ್ದಾರ್ ದಿಲ್‌ಶದ್‌ ಮಹಾತ್ ಮಾತನಾಡಿ,’ನಿಷ್ಠೆ ಇದ್ದರೆ ಯಾವುದೇ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯವಿದೆ’ ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯ ಬೀದರ್ ತಾಲ್ಲೂಕು ಸಹಾಯಕ ನಿರ್ದೇಶಕ ಸುಭಾಷ್ ನಾಗೂರೆ, ‘ಇಂಡಿಯಾ ಪೋಸ್ಟ್ ಪೇಮೆಂಟ್’ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಜಗದೀಶ್, ಅಂಚೆ ಸೂಪರಿಟೆಂಡೆಂಟ್‌ ಶ್ರೀಕರ ಬಾಬು, ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕಿ ಮಂಗಲಾ ಭಾಗವತ್, ಗೌಸಿಯಾ, ‌ಗಾಯತ್ರಿ, ಕಲ್ಲಪ್ಪ ಕೋಣಿ, ಉಪ ಅಂಚೆ ಸೂಪರಿಟೆಂಡೆಂಟ್‌ ಅಕ್ಷಯ್ ಕಾಮತ್, ಶ್ರೀಧರ ಹಂದಿಗೊಳ ಹಾಜರಿದ್ದರು.

ಇಲಾಖೆಯ ಶಾಖೆಗಳಲ್ಲಿ ಅತಿ ಹೆಚ್ಚು ಉಳಿತಾಯ ಖಾತೆ ತೆರೆದ ರೋಹಿದಾಸ್, ಮಲ್ಲಿಕಾರ್ಜುನ, ರಾಜೇಶ, ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕಿ ಮಂಗಲಾ ಭಾಗವತ್, ಫಿಬಾರಾಣಿ, ಸುಭಾಷ್ ದೊಡ್ಡಿ ಹಾಗೂ ಮಾರುತಿ ಬಿ. ಅವರನ್ನು ಸನ್ಮಾನಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು