News Karnataka Kannada
Sunday, May 05 2024
ಬೀದರ್

ಬೀದರ: ಸಂವಿಧಾನ ಜಾಗೃತಿಗಾಗಿ ಅಗಸ್ಟ್ ನಲ್ಲಿ ಜನಪರ ಸಮ್ಮೇಳನ

People's conference to be held in August for constitutional awareness
Photo Credit : News Kannada
ಬೀದರ: ಜೂ.22 ಸಾಹಿತ್ಯ ರತ್ನ ಅಣ್ಣಾಭಾವು ಸಾಠೆಯವರ 103ನೇ ಜಯಂತಿಯ ಅಂಗವಾಗಿ ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತ್ತಿಕ ಲೋಕಮಂಚ್ ಟ್ರಸ್ಟ್ ಬೀದರ ವತಿಯಿಂದ ಅಗಸ್ಟ್ ತಿಂಗಳಲ್ಲಿ ಜನಪರ ಸಮ್ಮೇಳನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಎಂ. ಎಸ್. ಮನೋಹರ, ಉಪಾಧ್ಯಕ್ಷ ಸುಮಂತ ಕಟ್ಟಿಮನಿ ಹಾಗೂ ಕಾರ್ಯದರ್ಶಿ ಪ್ರವೀಣ ಮೀರಾಗಂಜಕರ್ ಅವರು ತಿಳಿಸಿದ್ದಾರೆ.
ಈ ಸಮ್ಮೆಳನದಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಹತ್ತನೆ ತರಗತಿ, ಪಿಯುಸಿ ಹಾಗೂ ಪದವಿಯಲ್ಲಿ 90 ಪ್ರತಿಶತ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿ ಡಾಕ್ಟರೇಟ್ ಪಡೆದವರಿಗೂ ಕೂಡ ಸನ್ಮಾನಿಸಲಾಗುವುದು.
ವಿಚಾರ ಗೋಷ್ಠಿ, ಮತ್ತು ಸಂವಿಧಾನ ಕುರಿತು ವಿಶೇಷ ಕವಿಗೋಷ್ಠಿ ಏರ್ಪಡಿಲಾಗುವುದು ಎಂದು ಅವರುಗಳು ವಿವರಿಸಿದ್ದಾರೆ.
ಬೀದರ ಜಿಲ್ಲೆಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯ ಜಿರಾಕ್ಸ್ ಪ್ರತಿಯೊಂದಿಗೆ ಜುಲೈ-15-2023ರೊಳಗೆ ಮೊಬೈಲ್ ಸಂಖ್ಯೆ-8951498666-ಪ್ರವೀಣಕುಮಾರ, ಅಥವಾ 9880510109-ರಾಘವೆಂದ್ರ ಮುತ್ತಂಗಿ, ಅಥವಾ 9900893800-ದಯಾನಂದ ಬಂಬುಳಗಿ, ಅಥವಾ9663949166-ಶರತ್ ಅಭಿಮಾನ್ ಅವರನ್ನು ಸಂಪರ್ಕಿಸಿ ಹೆಸರು ನೊಂದಾಯಿಕೊಳ್ಳಲು ಕೋರಲಾಗಿದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು