ಬೀದರ್: ಬಿಜೆಪಿ ಬಿಟ್ಟು ಕೈ ಪಕ್ಷಕ್ಕೆ ಬಿಎಸ್ ಎಸ್ ಕೆ ಮಾಜಿ ಅಧ್ಯಕ್ಷ ಸಂಜಯ ಖೇಣಿ ಸೇರ್ಪಡೆಯಾಗಿದರು.
ಕಳೆದ 2013ರ ಅಶೋಕ ಖೇಣಿ ಗೆಲುವಿನಲ್ಲಿ ಸಂಜಯ ಖೇಣಿ ಪ್ರಮುಖ ಪಾತ್ರವಹಿಸಿದ್ದರು. ಅಶೋಕ ಖೇಣಿ ಮನೆಗೆ ಬಂದಾಗ ಸಂಜಯ ಖೇಣಿ ಅವರನ್ನು ಪಟಾಕಿ ಸಿಡಿಸಿ ಬರಮಾಡಿಕೊಂಡರು. ಸಂಜಯ ಖೇಣಿ ನೂರಾರು ಕಾರ್ಯಕರ್ತರ ಜೊತೆಗೆ ಬಂದು ಕಾಂಗ್ರೆಸ್ ಪಕ್ಷ ಸೇರಿದರು. ಇವರು ಅಶೋಕ ಖೇಣಿಯವರ ಸಹೋದರ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಬಸವರಾಜ ಜಾಬಶಟ್ಟಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷರಾದ ಬಾಬುರಾವ ತುಂಬಾ, ಬ್ಲಾಕ್ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾದ ಚಂದ್ರಶೇಖರ ಚನಶಟ್ಟಿ, ಕರೀಮ ಸಾಬ ಕಮಠಾಣ, ಸೇರಿ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.