ಬೀದರ್: ಬೀದರ್ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರಿಗೆ ರೈತರ ಕಂಡರೆ ಹೊಟ್ಟೆಕಿಚ್ಚು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು.
ಮೋದಿ ಸರ್ಕಾರದ ಯಾವುದೆ ಯೋಜನೆ ಇದ್ದರು ಹೊಟ್ಟೆ ಕಿಚ್ಚು ಪಡೋರು ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ. ಫಸಲ ಭಿಮಾ ಯೋಜನೆ ಬಗ್ಗೆ ಅಪಪ್ರಚಾರ ಮಾಡಿದ್ದು ಯಾರಾದ್ರು ಇದ್ದರೆ ಅದು ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಆರೋಪ ಮಾಡಿದರು.
ಕರ್ನಾಟಕ ದಲ್ಲಿ ಕಾಂಗ್ರೆಸ್ ಸರ್ಕಾರ ಇದೆ ಬರಗಾಲ ಘೋಷಣೆ ಯಾಗಿ ಐದು ತಿಂಗಳಾದ್ರು ನಯಾ ಪೈಸೆ ರೈತರ ಖಾತೆಗೆ ಹಣ ಜಮೆ ಮಾಡಿಲ್ಲಾ. ಅದೇ ರೀತಿ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ ಕೂಡಾ ರಾಜ್ಯ ಸರ್ಕಾರದ ಅಧಿಕಾರಿಗಳೆ ಅದನ್ನ ಮಾಡಬೇಕು ಇದರ ಸಂಪೂರ್ಣ ಹೊಣೆಗಾರಿಕೆ ಸಚಿವ ಈಶ್ವರ ಖಂಡ್ರೆ ಯವರಿಗೆ ಇದೆ, ಆದರೆ ಇಲ್ಲಿಯವರೆ ರಾಜ್ಯ ಸರ್ಕಾರ ಮಾಹಿತಿ ನೀಡಿಲ್ಲಾ ಅಂತಾ ಖಾರವಾಗಿ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮೇಲೆ ಆರೋಪ ಮಾಡಿದ್ದಾರೆ.
ಫಸಲ ಭೀಮಾ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಮಾಹಿತಿ ನೀಡಿಲ್ಲಾ ನಂತರ ಅವರು ನನ್ನ ಕಡೆ ಬಂದಿದ್ದರೆ ನಾನು ಮಾಡಿಸುತ್ತಿದ್ದೆ ಕಳೆದ ಎಂಟು ವರ್ಷ ನಾನು ಫಸಲ ಬಿಮಾ ಯೋಜನೆ ಹಣ ರೈತರಿಗೆ ಕೊಡಿಸಿದ್ದೆನೆ ಆದ್ರೆ ಇದರಲ್ಲಿ ಸಚಿವ ಈಶ್ವರ ಖಂಡ್ರೆ ಸುಳ್ಳು ಹೇಳುತ್ತಾ ತಿರುಗುತ್ತಿದ್ದಾರೆ ಎಂದರು.