ಬೀದರ್: ಜಿಲ್ಲೆಯ ಪ್ರತಿಷ್ಠಿತ ಸೇವಾ ಸಸ್ಥೆಯಾದ ಬಾಪು ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಕಳೆದ 10 ವರ್ಷಗಳಿಂದ ಗ್ರಾಮೀಣಾಭಿವೃದ್ಧಿ, ಸುಸ್ಥಿರ ಕೃಷಿ, ರೈತರ ಆದಾಯ ಹೆಚ್ಚಳವಾಗುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳಾ ಸಬಲೀಕರಣ, ಯುವ ಸಬಲೀಕರಣ, ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರಿಗೆ ಸ್ವಾವಲಂಬಿ ಜೀವನ ನಡೆಸಲು ಅನುವುವಾಗುವ ನಿಟ್ಟಿನಲ್ಲಿ ತರಬೇತಿ ನೀಡಿ ಸ್ವ ಸಹಾಯ ಸಂಘದ ಮಹಿಳಾ ಸದಸ್ಯರಿಗೆ ಆರ್ಥಿಕ ಅಭಿವೃದ್ಧಿ ಹಾಗೂ ಸ್ವಾವಲಂಬಿಯಾಗಲು ಜಿಲ್ಲೆಯ, ಕರ್ನಾಟಕ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ ಹಾಲಿನ ಉಪ ಉತ್ಪನ್ನಗಳು ಹಾಗೂ ಮಾರುಕಟ್ಟೆ ಕುರಿತ ತರಬೇತಿ ನೀಡುತ್ತ ಜಿಲ್ಲೆಯ ಅಭಿವೃದ್ಧಿಯಲ್ಲಿ ಸಕ್ರೀಯವಾಗಿ ಸಂಸ್ಥೆಯ ಕೆಲಸ ಮಾಡುತ್ತಲ್ಲಿದೆ.
ಇನ್ನು ಈ ನಿಟ್ಟಿನಲ್ಲಿ ಬರುವ ಸಾಲಿನಲ್ಲಿ ಜಿಲ್ಲೆಯಾದ್ಯಂತ, ಜಿಲ್ಲಾ ಪಂಚಾಯತ್, ಬೀದರ್ ಅರಣ್ಯ ಇಲಾಖೆಯವರ ಸಂಯೋಜನೆಯಲ್ಲಿ ‘ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ’ ಅಡಿಯಲ್ಲಿ ಆಯ್ದ ಗ್ರಾಮ ಪಂಚಾಯತ್ ಅವರ ಸಹಕಾರದಿಂದ ಕನಿಷ್ಟ ಒಂದು ಸಾವಿರ ಕೃಷಿ ಕಾರ್ಮಿಕರು ಹಾಗೂ ಬಡ ಮಹಿಳಾ ಉದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುತ್ತ,
ಮೇಲೆ ನಮೂದಿಸಿದ ‘ಲಕ್ಷ ವೃಕ್ಷ ಸಸಿ ನೆಡುವ ಅಭಿಯಾನ ಯೋಜನೆ’ ಲಕ್ಷ ಸಸಿ ನೆಡೆಸಿ ಅವುಗಳ ಸಂರಕ್ಷಣೆ ಹಾಗೂ ಬೆಳವಣಿಗೆಯಿಂದ ಬೀದರ ಜಿಲ್ಲೆಯ ಪರಿಸರ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಬಾಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಅವಕಾಶ ನೀಡಿ ಕಾರ್ಯನಿರ್ವಹಿಸಲು ಅನುವುಮಾಡಿಕೊಡಬೇಕಾಗಿ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ, ಜಿ.ಪಂ ಬೀದರ ಇಲ್ಲಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮುಖಾಂತರವಾಗಿ ಬಾಪು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಬೀದರ ಇದರ ಅಧ್ಯಕ್ಷರಾದ ಕಾಶಿನಾಥ ಪಾಟೀಲ್ ಸಂಗಮೇಶ್ವರ ಅವರು ಮನವಿ ಸಲ್ಲಿಸಿದ್ದರು.