ಔರಾದ: ಔರಾದ ಮೀಸಲು ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಪ್ರಭು ಚವ್ಹಾಣ ಅವರು ಅಸಂಖ್ಯಾತ ಅಭಿಮಾನಿಗಳು ಹಾಗೂ ಕಾರ್ಯಕರ್ತರೊಂದಿಗೆ ಮೆರವಣಿಗೆ ಮೂಲಕ ತಹಸೀಲ್ ಕಚೇರಿವರೆಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್, ನಾಂದೇಡ್ ಜಿಲ್ಲೆಯ ಸಂಸದರಾದ ಪ್ರತಾಪ ಪಾಟೀಲ ಚಿಕ್ಲೆಕರ್, ಉದಗೀರ ಮಾಜಿ ಶಾಸಕರಾದ ಗೋವಿಂದ ಕೇಂದ್ರೆ, ಮುಖಂಡರಾದ ವಸಂತ ಬಿರಾದಾರ, ರೌಫುದ್ದೀನ್ ಕಛೇರಿವಾಲೆ, ಅಮರನಾಥ ಪಾಟೀಲ, ಶಿವರಾಜ ಗಂದಗೆ, ವೀರಣ್ಣಾ ಕಾರಬಾರಿ, ಅರಹಂತ ಸಾವಳೆ, ವಿಜಯಕುಮಾರ ಪಾಟೀಲ ಗಾದಗಿ, ಕೀರಣ ಪಾಟೀಲ, ಸುರೇಶ ಭೋಸ್ಲೆ, ಶರಣಪ್ಪಾ ಪಂಚಾಕ್ಷರಿ, ರಂಗರಾವ ಜಾಧವ, ಸಂತೋಷ ಪೋಕಲವಾರ, ಶಿವರಾಜ ಅಲ್ಮಾಜೆ, ಸಚಿನ್ ರಾಠೋಡ್, ದೊಂಡಿಬಾ ನರೋಟೆ, ಕೇರಬಾ ಪವಾರ, ಡಾ.ಕಲ್ಲಪ್ಪಾ ಉಪ್ಪೆ, ಡಾ.ವೈಜಿನಾಥ ಬುಟ್ಟೆ, ಪ್ರತೀಕ್ ಚವ್ಹಾಣ, ರಾಮಶೆಟ್ಟಿ ಪನ್ನಾಳೆ, ಹಣಮಂತ ಸುರನಾರ, ಖಂಡೋಬಾ ಕಂಗಟೆ, ಶೇಷರಾವ ಕೋಳಿ, ರಮೇಶ ಉಪಾಸೆ, ರಾಹುಲ ಕೇಂದ್ರೆ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.