ಕಲಬುರ್ಗಿ: 25 ವಷ೯ದಿಂದ ಪಕ್ಷದಲ್ಲಿ ದುಡಿದು ನಾನು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಡರೂ, ನನಗೆ ಸೂಕ್ತ ಸ್ಥಾನ ಮಾನ ದೊರೆತಿಲ್ಲ ಎಂದು ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತೆ ಸಾವಿತ್ರಿ ಕುಳಗೇರಿ ಕಣ್ಣೀರು ಸುರಿಸಿದ್ದಾರೆ.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಕಾರ್ಯಕರ್ತರ ಸಭೆ ಮುಗಿದ ಬಳಿಕ, ಸಚಿವೆ ಶೋಭಾ ಅವರಿಗೆ ಶಾಲು ಹೊದಿಸುವ ಸಂದರ್ಭದಲ್ಲಿ ಭಾವುಕರಾಗಿ ತಮ್ಮ ಅಳಲನ್ನು ತೊಡಿಕೊಂಡರು.
ಶುಕ್ರವಾರ ನಡೆದ ಮಹಾನಗರ ಪಾಲಿಕೆ ಚುನಾವಣೆ ಗೆ ವಾರ್ಡ್ ನಂ- 31ರ ಬಿಜೆಪಿ ಟಿಕೆಟ್ ಕೇಳಿದ್ದೆ. ಆದರೆ ನನಗೆ ದೊರಕಿಲ್ಲ ಎಂದು ಸಚಿವೆ ಶೋಭಾ ಕರಂದ್ಲಾಜೆ ಎದುರಿಗೆ ಹೇಳಿಕೊಂಡರು.
ಮೊನ್ನೆ ಮೊನ್ನೆ ಬಂದವರಿಗೆ ನಿಗಮ ಮಂಡಳಿ ಸ್ಥಾನವನ್ನು ನೀಡಿದ್ದರಿಂದ ದಶಕಗಳಿಂದ ಪಕ್ಷದ ಸಂಘಟನೆಗಾಗಿ ದುಡಿದವರಿಗೆ ನೋವುಂಟಾಗಿದೆ ಎಂದು ಹೇಳಿದರು.
ಮಹಿಳಾ ಕಾರ್ಯಕರ್ತರು ಕಣ್ಣೀರಿಟ್ಟು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರೂ ಅವರನ್ನು ಸಮಾಧಾನ ಹೇಳುವ ಬದಲು ಸಚಿವೆ ಶೋಭಾ ವೇದಿಕೆಯಿಂದ ನಿರ್ಗಮಿಸಿದರು.