News Karnataka Kannada
Saturday, May 04 2024
ಕಲಬುರಗಿ

ಬಸವ ದೇವಾಲಯ ತೆರವು ವಿರೋಧಿಸಿ ವೀರಶೈವ ಸಮುದಾಯದವರಿಂದ ರಸ್ತೆ ತಡೆ

Karnataka Police
Photo Credit :

ಕಲಬುರಗಿ, : ನಗರದ ಯಮುನಾ ಕಾಲೋನಿಯಲ್ಲಿನ ಘಂಟೆ ಲೇಔಟ್‍ನಲ್ಲಿರುವ ಬಸವಮೂರ್ತಿ ಹೊಂದಿದ ದೇವಾಲಯವನ್ನು ಮಹಾನಗರ ಪಾಲಿಕೆ ತೆರವುಗೊಳಿಸುವುದನ್ನು ವಿರೋಧಿಸಿ ವೀರಶೈವ ಲಿಂಗಾಯತ ಸಮುದಾಯದವರು ಉದ್ರಿಕ್ತಗೊಂಡು ಬುಧವಾರ ನಗರದ ಸೇಡಂ ರಸ್ತೆಯಲ್ಲಿ ರಸ್ತೆ ತಡೆ ಚಳುವಳಿ ಮಾಡಿದರು.
ಮಹಾನಗರ ಪಾಲಿಕೆಯು ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಪಾಲಿಕೆಯು ಹಿಂದೂ ಸಮುದಾಯದ ಆರಾಧ್ಯ ದೈವ ಬಸವ ಮೂರ್ತಿಯನ್ನು ತೆರವುಗೊಳಿಸಲು ಮುಂದಾಗಿರುವುದು ಸರಿಯಲ್ಲ. ಸುಪ್ರಿಮ್‍ಕೋರ್ಟ್ ಆದೇಶದಂತೆ ಬಸವ ಮೂರ್ತಿ ಇರುವ ದೇವಸ್ಥಾನವನ್ನು ಮಹಾನಗರ ಪಾಲಿಕೆಯು ತೆರವುಗೊಳಿಸಲು ಮುಂದಾಗಿರುವುದನ್ನು ಪ್ರತಿಭಟನೆಕಾರರು ಪ್ರಬಲವಾಗಿ ವಿರೋಧಿಸಿದರು.
ಖಾಸಗಿ ಜಾಗದಲ್ಲಿರುವ ಬಸವ ಮೂರ್ತಿ ದೇವಸ್ಥಾನವನ್ನು ತೆರವು ಮಾಡುವುದು ಏಕೆ? ಎಂದು ದೇವಸ್ಥಾನದ ತೆರವಿಗೆ ಪ್ರತಿಭಟನೆಕಾರರು ಪಾಲಿಕೆಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದರು.
ಅದೂ ಈಗ ಶ್ರಾವಣ ತಿಂಗಳು ಇದ್ದು, ಬಸವ ದೇವಸ್ಥಾನವನ್ನು ಯಾವುದೇ ಕಾರಣಕ್ಕೂ ತೆರವುಗೊಳಿಸಬಾರದು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು. ಮತ್ತೊಂದೆಡೆ ನಗರದ ವರ್ತುಲ ರಸ್ತೆಯ ಖರ್ಗೆ ವೃತ್ತದಲ್ಲಿಯೂ ಸಹ ಟೈರ್‍ಗೆ ಬೆಂಕಿ ಹಚ್ಚಿ ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಖಾಸಗಿ ಪ್ರದೇಶದಲ್ಲಿರುವ ಮೂರ್ತಿ ತೆರವು ಅನಗತ್ಯವಾಗಿದೆ. ಅಲ್ಲದೇ ಹಿಂದೂ ಸಂಪ್ರದಾಯದಂತೆ ಶ್ರಾವಣ ಮಾಸದಲ್ಲಿ ಆರಾಧ್ಯ ದೈವ ಬಸವ ದೇವಸ್ಥಾನವನ್ನು ಪಾಲಿಕೆ ತೆರವುಗೊಳಿಸುತ್ತಿರುವುದು ನೋವುಂಟು ಮಾಡಿದೆ ಎಂದು ಕಿಡಿಕಾರಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು