ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಜನಪ್ರಿಯತೆ ಬಹಳ ದಿನ ಉಳಿಯಲ್ಲ. ಜುಲೈ.1ರಂದು ಅಕ್ಕಿ ಕೊಡದಿದ್ದರೇ ರಾಜ್ಯಾಧ್ಯಂತ ಪ್ರತಿಭಟನೆ ಮಾಡುವುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ. 10 ಕೆಜಿ ಉಚಿತ ಅಕ್ಕಿ ಘೋಷಣೆ ಮಾಡಿದ ನಂತರ ಕೊಡಬೇಕು. ಅಕ್ಕಿ ಸಿಗುತ್ತಿಲ್ಲ ಎಂದರೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಇದೇ ವಿಷಯಕ್ಕೆ ಅಕ್ಕಿ ಬರಲ್ಲ ಅಂತ ಕುಂಟು ನೆಪ ಹೇಳಬಾರದು ಎಂದು ಗುಡುಗಿದರು.
ಈಗ ಛತ್ತೀಸ್ ಗಢದಿಂದ ಅಕ್ಕಿ ತರುತ್ತೇವೆ ಎಂದು ಹೇುತ್ತಿದ್ದಾರೆ. ರಾಜ್ಯದ ಬಡವರಿಗೆ ಒಳ್ಳೇದು ಆಯ್ತು. ರಾಜ್ಯದ ರೈತರು ಅಕ್ಕಿ ಕೊಡಲು ಬಂದರೆ ಖರೀದಿಸಿದ್ರೆ ಒಳ್ಳೇದು. ಯಾವುದೋ ಒಂದು ರೀತಿಯಲ್ಲಿ ಜನರಿಗೆ ಅಕ್ಕಿ ಕೊಟ್ಟರೆ ಸಾಕು. ಘೋಷಣೆಯಂತೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಜುಲೈ.1ರಂದು ಕೊಡದೇ ಇದ್ದರೆ ರಾಜ್ಯಾಧ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದರು.