ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ರಾಕ್ಲೈನ್ ವೆಂಕಟೇಶ್ ಅವರ ಮಗ ವೆಂಕಟೇಶ್ ಅಭಿಲಾಷ್ ಫೇಕ್ ಕಾಗದ ಪತ್ರಗಳನ್ನು ಸೃಷ್ಟಿಸಿ ಬ್ಯಾಂಕೊಂದನ್ನು ವಂಚಿಸಿದ ಆರೋಪದಲ್ಲಿ ನಗರದ ಸಿಸಿಬಿ ಪೊಲೀಸ್ 5-ಜನರ ತಂಡವೊಂದನ್ನು ಬಂಧಿಸಿದ್ದು ಅವರ ಪೈಕಿ ಅಭಿಲಾಷ್ ಒಬ್ಬರೆಂದು ಆರೋಪಿಸಲಾಗಿದೆ.
ಇದೇ ಹಿನ್ನೆಲೆಯಲ್ಲಿ ಅಭಿಲಾಷ್ ರನ್ನು ಸಿಸಿಬಿ ಅಧಿಕಾರಿಗಳು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ವೃದ್ಧೆ ಹೆಸರಿನಲ್ಲಿ ಸೃಷ್ಟಿಸಿದ್ದ ನಕಲಿ ದಾಖಲೆ ಬಳಸಿ ಬ್ಯಾಂಕ್ ವೊಂದರಲ್ಲಿ 1 ಕೋಟಿ ರೂ. ಸಾಲ ಪಡೆಯಲಾಗಿದೆ. ಅಭಿಲಾಷ್ ಪಾಲುದಾರಿಕೆಯ ಕಂಪನಿಯ ಖಾತೆಗೆ ಸಾಲದ ಮೊತ್ತ ವರ್ಗಾವಣೆ ಆಗಿದೆ ಎಂದು ಅರೋಪಿಸಲಾಗಿದೆ.