ಬೆಂಗಳೂರು: ಸೊಸೆಯನ್ನು ಹೊಡೆದು ಕೊಲೆ ಮಾಡಿದ ಆರೋಪದ ಮೇಲೆ 70 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾರೋಹಳ್ಳಿ ಗ್ರಾಮದ ನಿವಾಸಿ ಘಂಟಯ್ಯ ಎಂಬಾತ ತನ್ನ ಸೊಸೆ ಉದ್ಯೋಗಕ್ಕಾಗಿ ಮನೆಯಿಂದ ಹೊರಹೋಗುವುದನ್ನು ವಿರೋಧಿಸಿದ್ದ. ಕವಿತಾ ತನ್ನ ಗಂಡನ ಆದಾಯವು ಸಾಕಾಗದ ಕಾರಣ ಖಾಸಗಿ ಕಾಲೇಜಿನಲ್ಲಿ ಅಟೆಂಡೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಳು. ಈ ಜೋಡಿ ಮದುವೆಯಾಗಿ 15 ವರ್ಷಗಳಾಗಿವೆ. ತನ್ನ ಸೊಸೆ ಕವಿತಾ ಕೆಲಸಕ್ಕೆ ಹೋಗುವುದು ಘಂಟಯ್ಯನಿಗೆ ಇಷ್ಟವಿರಲಿಲ್ಲ ಮತ್ತು ಕೆಲಸ ಮಾಡುವುದನ್ನು ನಿಲ್ಲಿಸುವಂತೆ ಆಗಾಗ್ಗೆ ಜಗಳವಾಡುತ್ತಿದ್ದನು.
ಅಲ್ಲದೆ ಇತ್ತೀಚೆಗೆ, ಘಂಟಯ್ಯ ಸೊಸೆ ಕವಿತಾ ಬಗ್ಗೆ ಅನುಮಾನ ಪಡಲು ಆರಂಭಿಸಿದ್ದ. ಆದರೆ ಕಳೆದ ದಿನ (ಗುರುವಾರ) ಸಂಜೆ, ಅವನು ಸೊಸೆ ಮೇಲೆ ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಸೊಸೆ ಕವಿತಾ ಮೃತಪಟ್ಟಿದ್ದಾಳೆ. ಆರೋಪಿಯನ್ನುಇಂದು (ಜುಲೈ.14) ವರುಣಾ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.