ತುಮಕೂರು: ಶ್ರಾವಣ ಮಾಸದ ಪ್ರಯುಕ್ತ ಆಗಸ್ಟ್ 19ರಂದು ಶನಿವಾರ ತುಮಕೂರಿನ ಯಕ್ಷದೀವಿಗೆ (ರಿ.) ವತಿಯಿಂದ ಹನುಮಂತಪುರದ ಶ್ರೀ ಬಯಲಾಂಜನೇಯಸ್ವಾಮಿ ದೇವಸ್ಥಾನದಲ್ಲಿ ಸಂಜೆ 6:00ರಿಂದ ಯಕ್ಷಗಾನ ತಾಳಮದ್ದಳೆ ‘ಚೂಡಾಮಣಿ’ (ಕವಿ: ಕುಂಬ್ಳೆ ಪಾರ್ತಿಸುಬ್ಬ) ಆಯೋಜಿಸಲಾಗಿದೆ.
ಹಿಮ್ಮೇಳದಲ್ಲಿ ಭಾಗವತರಾಗಿ ಪುತ್ತೂರಿನ ರಮೇಶ್ ಭಟ್, ಚೆಂಡೆ ಪಿ. ಜಿ. ಜಗನ್ನಿವಾಸರಾವ್, ಮದ್ದಳೆ ಬೆಂಗಳೂರಿನ ಅವಿನಾಶ್ ಬೈಪಾಡಿತ್ತಾಯ ನಿರ್ವಹಿಸುವರು.
ಅರ್ಥಧಾರಿಗಳಾಗಿ ಹನೂಮಂತನ ಪಾತ್ರವನ್ನು ಉಜಿರೆ ಅಶೋಕ ಭಟ್, ರಾವಣನಾಗಿ ಶಶಾಂಕ ಅರ್ನಾಡಿ, ಸೀತೆಯಾಗಿ ಸಿಬಂತಿ ಪದ್ಮನಾಭ, ಲಂಕಿಣಿಯಾಗಿ ಆರತಿ ಪಟ್ರಮೆ ನಿರ್ವಹಿಸುವರು.
ತಾಳಮದ್ದಳೆಗೂ ಮುನ್ನ, ಸಂಜೆ 5:00ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಡುಗಾರಿಕೆ ಮಹಿಮಾ ಭಟ್ ಸರ್ಪಂಗಳ, ವಯೋಲಿನ್ ಅನ್ನು ವಿದ್ವಾನ್ ಪಿ. ಎಸ್. ಪ್ರಸನ್ನಕುಮಾರ್, ಮೃದಂಗವನ್ನು ವಿದ್ವಾನ್ ಅಂಜನ್ ಕುಮಾರ್ ಎಸ್. ನಿರ್ವಹಿಸಲಿದ್ದಾರೆ.