ತುಮಕೂರು: ನಗರದ ಸ್ನೇಹ ಸಂಗಮ ಹಾಲ್ ನಲ್ಲಿ ಉದ್ಯಮಿಗಳೊಂದಿಗೆ ಆಯೋಜಿಸಿದ್ದ ಕೇಂದ್ರ ಸಚಿವರ ಸಂವಾದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಇಟ್ಟಿದ್ದ ಭಾರತ ಮಾತೆಯ ಭಾವಚಿತ್ರದ ಎದುರು ಅತಿಥಿಗಳು ಶೂ ಬಿಟ್ಟು ಅವಮಾನ ಮಾಡಿರುವ ಘಟನೆ ಜರುಗಿದೆ.
ಕೇಂದ್ರ ಸಚಿವ ಪಿಯೂಶ್ ಗೋಯೇಲ್ ಅವರು ಉದ್ಯಮಿಗಳ ಜೊತೆ ಸಂವಾದ ನಡೆಸಲು ಬಂದ ಸಂದರ್ಭದಲ್ಲಿ ಉದ್ಘಾಟನೆ ವೇಳೆ ವೇದಿಕೆ ಮೇಲೆ ಅಳವಡಿಸಿದ್ದ ಭಾರತ ಮಾತೆಯ ಎದುರು ಅತಿಥಿಗಳು ಶೂ ಬಿಟ್ಟು ಅವಮಾನ ಮಾಡಿರುವ ಘಟನೆಯ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ.
ಕೇಂದ್ರ ಸಚಿವರ ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಕೊಡುವ ಗೌರವ ಇದೇನಾ, ನಾಗರಿಕ ಸಮಾಜಕ್ಕೆ ಇರುವ ಕನಿಷ್ಠ ಕಾಳಜಿ ರಾಜಕೀಯ ಮುಖಂಡರಿಗೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.