ತುಮಕೂರು: ತುಮಕೂರು ಸಮೀಪದ ಗೊಲ್ಲಹಳ್ಳಿ ಸಿದ್ದಾರ್ಥ ನಗರ ಡಾ.ಜಿ.ಪರಮೇಶ್ವರ ನಿವಾಸಕ್ಕೆ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಹಾರೋಹಳ್ಳಿಯ ಕೋಡಿಮಠದ ಶ್ರೀಗಳು ಭೇಟಿ ನೀಟಿ ಆರೋಗ್ಯವನ್ನು ವಿಚಾರಿಸಿ ಆಶೀರ್ವದಿಸಿದರು.
ಇತ್ತೀಚೆಗೆ ಕೊರಟಗೆರೆ ವಿಧಾನ ಸಭಾ ಚುನಾವಣೆಯ ಪ್ರಯುಕ್ತ ಡಾ.ಜಿ ಪರಮೇಶ್ವರ್ ಕಾರ್ಯಕರ್ತರೊಂದಿಗೆ ಚುನಾವಣ ಪ್ರಚಾರ ಮಾಡುವ ಸಂದರ್ಭದಲ್ಲಿ ಕಿಡಿಗೇಡಿ ಕಲ್ಲು ಎಸೆದ ಪಡರಿಣಾಮವಾಗಿ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು, ಡಾ.ಜಿ ಪರಮೇಶ್ವರ್ ಅವರು ತುಮಕೂರು ಗ್ರಾಮಾಂತರದ ಗೊಲ್ಲಹಳ್ಳಿಯ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು, ಪರಮೇಶ್ವರ್ ಅವರ ನಿವಾಸಕ್ಕೆ ಹಾಸನ ಜಿಲ್ಲೆಯ ಅರಸಿಕೆ ತಾಲೂಕಿನ ಹಾರೋಹಳ್ಳಿಯ ಕೋಡಿಮಠದ ಶ್ರೀಗಳು ಭೇಟಿ ನೀಟಿ ಆರೋಗ್ಯವನ್ನು ವಿಚಾರಿಸಿ ಆಶೀರ್ವದಿಸಿದ್ದಾರೆ.
ತಮ್ಮ ನಿವಾಸಕ್ಕೆ ಭೇಟಿ ನೀಡಿದ ಕೋಡಿ ಮಠದ ಶ್ರೀಗಳನ್ನು ಡಾ.ಜಿ ಪರಮೇಶ್ವರ್ ಹಾಗೂ ಪತ್ನಿ ಕನ್ನಿಕಾ ಪರಮೇಶ್ವರ್ ಅಭಿನಂದಿಸಿದ್ದಾರೆ.