News Karnataka Kannada
Monday, May 06 2024
ಶಿವಮೊಗ್ಗ

ಶಿವಮೊಗ್ಗ: ಫಾಮರ್ಸಿ ಕಾಲೇಜಿನಲ್ಲಿ ದಂತ ತಪಾಸಣಾ ಶಿಬಿರ

Dental check-up camp at Pharmacy College
Photo Credit : By Author

ಶಿವಮೊಗ್ಗ: ವ್ಯಕ್ತಿತ್ವದ ಸೌಂದರ್ಯ ಕಾಪಾಡುವಲ್ಲಿ ದಂತ ಪ್ರಮುಖವಾಗಿದ್ದು ದಂತ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡಬೇಡಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್ ಸಲಹೆ ನೀಡಿದರು.

ಶುಕ್ರವಾರ ನಗರದ ನ್ಯಾಷನಲ್ ಫಾರ್ಮಸಿ ಕಾಲೇಜಿನಲ್ಲಿ ಸುಬ್ಬಯ್ಯ ಡೆಂಟಲ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಉಚಿತ ದಂತ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಜನರಲ್ಲಿ ಹಲ್ಲು ಮತ್ತು ಕಣ್ಣುಗಳ ಬಗ್ಗೆ ಮುಂಜಾಗೃತಿ ವಹಿಸುವುದು ಕಡಿಮೆ. ಆರೋಗ್ಯ ಚೆನ್ನಾಗಿ ಇರಬೇಕಾದರೆ ಹಲ್ಲಿನ ಆರೋಗ್ಯ ಮೊದಲು ಸರಿಯಿರಬೇಕು. ಹಲ್ಲುಗಳು ಸರಿಯಾಗಿದ್ದಾಗ ಎಲ್ಲ ಬಗೆಯ ಆಹಾರ ಸೇವಿಸಲು ಸಾಧ್ಯವಾಗುತ್ತದೆ. ಬಾಯಿ ಮನುಷ್ಯನ ಸೌಂದರ್ಯದ ಪ್ರಮುಖ ಸಾಧನ. ಆಹಾರ ಸೇವಿಸಲು, ಮಾತನಾಡಲು, ನಗು ಮೊಗದಿ ಎಲ್ಲರೊಂದಿಗೆ ಬೆರೆಯಲು ಬಾಯಿ ಮತ್ತು ಹಲ್ಲಿನ ಆರೋಗ್ಯ ಮುಖ್ಯ. ಕೃತಕ ಹಲ್ಲುಗಳು ನಿಜವಾದ ಹಲ್ಲಿನಷ್ಟು ಆರಾಮದಾಯಕವಾಗಿರುವುದಿಲ್ಲ ಎಂದು ಹೇಳಿದರು.

ಎನ್ಇಎಸ್ ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಮಾತನಾಡಿ, ಅನಾರೋಗ್ಯವಾಗಿ ಒದ್ದಾಡುವುದಕ್ಕಿಂತ ಆರೋಗ್ಯದ ಮುಂಜಾಗೃತೆ ವಹಿಸುವುದು ಉತ್ತಮ. ಮೊಬೈಲ್ ವ್ಯಸನದಿಂದಾಗಿ ಮಕ್ಕಳಲ್ಲಿನ ಏಕಾಗ್ರತೆಯ ಶಕ್ತಿ ಕಡಿಮೆಯಾಗುತ್ತಿದೆ. ಆಧುನಿಕತೆ ಬೆಳೆದಂತೆ ಮನುಷ್ಯನಲ್ಲಿ ಆರೋಗ್ಯದ ಶಕ್ತಿಯು ಕುಂದುತ್ತಿರುವುದು ಬೇಸರದ ಸಂಗತಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಮಾತನಾಡಿ, ಹಿರಿಯರು ಹೇಳಿಕೊಟ್ಟ ಸ್ವಚ್ಚತಾ ಪ್ರಕ್ರಿಯೆ ಬಗ್ಗೆ ಅಲಕ್ಷಿಸಿದ್ದೇವೆ. ಅಂತಹ ಅಲಕ್ಷತೆಯ ಪರಿಣಾಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಾವು ತಿನ್ನುವ ಜಂಕ್ ಫುಡ್ ಆರೋಗ್ಯದ ಮೇಲೆ ಬೀರುವ ತೊಂದರೆಗಳ ಕುರಿತು ಅರಿವು ನಮಗಿರಬೇಕು ಎಂದು ಹೇಳಿದರು.

ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾ.ಅನಿಲ್ ಬಾಬು ದಂತ ಆರೋಗ್ಯದ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ಸಿದ್ದಲಿಂಗಸ್ವಾಮಿ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು