ತುಮಕೂರು: ತಿಪಟೂರು ತಾಲೂಕಿನಾದ್ಯಂತ ಮುಂಗಾರು ಮಳೆ ಇಲ್ಲದೆ ರೈತರು ಪರಿತಪಿಸುತ್ತಿದ್ದಾರೆ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಸಮಯಕ್ಕೆ ಸರಿಯಾಗಿ ವಿದ್ಯುತ್ ಪರಿವರ್ತಕಗಳನ್ನು ನೀಡದಿದ್ದರೆ ಬೆಸ್ಕಾಂ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಎಚ್ಚರಿಸಿದರು.
ತಿಪಟೂರು ನಗರದ ತಮ್ಮ ಸ್ವಗೃಹದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಬೋರ್ ವೆಲ್ ಮೊರೆ ಹೋಗುತ್ತಿದ್ದು ಬೆಸ್ಕಾಂ ಇಲಾಖೆ ನಿಗದಿತ ಸಮಯಕ್ಕೆ ನೀಡದೆ ೨೦ ದಿನಗಳವರೆಗೆ ಕಾಯುವಂತೆ ಮಾಡಿದೆ, ಎಲ್ಲಾ ಹಳ್ಳಿಗಳಲ್ಲಿಯೂ ಈ ವಿಚಾರವಾಗಿ ರೈತರು ದೂರ ಹೇಳುತ್ತಿದ್ದಾರೆ ಎಂದರು.
ನೂತನ ಶಾಸಕರು ಈ ವಿಚಾರವಾಗಿ ಬೆಸ್ಕಾಂ ಕಚೇರಿಯಲ್ಲಿ ಧ್ವನಿ ಎತ್ತಬೇಕು. ಕಾಂಗ್ರೆಸ್ ಸರ್ಕಾರ ವಿದ್ಯುತ್ ಉಚಿತ ಎಂದು ಹೇಳಿ ನೇಕಾರರು, ಗಾಮೆಂಟ್ಸ್, ಸಣ್ಣ ಕೈಗಾರಿಕೆಗಳಿಗೆ ದೂರ ಹೊಡೆತ ಬಿದ್ದಿದೆ. ಕೂಡಲೇ ಸರ್ಕಾರ ಪರಿಶೀಲಿಸಬೇಕಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಎಂಎಸ್ ಶಿವಸ್ವಾಮಿ ಮಾತನಾಡಿ ಒಂದು ರೆವಿನ್ಯೂ ಗ್ರಾಮಕ್ಕೆ ಒಬ್ಬ ಲೈನ್ ಮ್ಯಾನ್ ಹಿಂದೆ ನೇಮಿಸಿದ್ದರು ಪ್ರತಿ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದರು ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ ಲೈನ್ ಮ್ಯಾನ್ ಹುದ್ದೆ ಭರ್ತಿ ಮಾಡಿದ್ದರು ಮುಂದಿನ ಸರ್ಕಾರಗಳು ಲೈನ್ ಮ್ಯಾನ್ ಹುದ್ದೆಗೆ ಅವಕಾಶ ನೀಡಲಿಲ್ಲ ರೈತರೇ ಟ್ರಾನ್ಸ್ಫಾರ್ಮರ್ ರಿಪೇರಿ ಮಾಡಿಸಲು ಹಣ ಹಾಕಿಕೊಂಡು ರಿಪೇರಿ ಮಾಡಿಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಎಸ್.ಸಿ. ಘಟಕದ ಧನಂಜಯ್, ನಂಜಲಘಟ್ಟದ ರಘು ಮುಂತಾದವರಿದ್ದರು.