ತುಮಕೂರು: ನಗರದ ಚಿಕ್ಕಪೇಟೆ ಬಡಾವಣೆ ಪಂಚಾಂಗ ಬೀದಿಯಲ್ಲಿರುವ ಶ್ರೀ ಶ್ರೀನಿವಾಸ ದೇವಸ್ಥಾನದ ರಾಜಗೋಪುದ ಬ್ರಹ್ಮಕುಂಬಾಭಿಷೇಕ ಕಾರ್ಯಕ್ರಮದ ಅಂಗವಾಗಿ ಹರಿಹರಪುರದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರ ಪುರಪ್ರವೇಶ ಕೋಟೇ ಆಂಜನೇಯಸ್ವಾಮಿ ದೇವಸ್ಥಾನ ದ್ವಾರದ ಮೂಲಕ ನಡೆಯಿತು.
ಈ ವೇಳೆ ದೇವಾಲಯ ಸಮಿತಿಯ ಎಚ್.ಕೆ.ರಮೇಶ್, ಶ್ರೀನಿವಾಸ್ಜೋಯಿಸ್, ಟಿ.ಎಸ್.ಅಚ್ಚಮ್ಮ, ಫಣೀಶ್, ಶ್ರೀಪತಿ, ರಾಮಣ್ಣ, ಸಿ.ಎನ್.ರಮೇಶ್, ಚಂದ್ರಶೇಖರ್, ಎಂ.ಕೆ.ನಾಗರಾಜರಾವ್ ಮತ್ತಿತರ ಸಮಾಜದ ಪ್ರಮುಖರು ಶ್ರೀಗಳಿಗೆ ಭವ್ಯ ಸ್ವಾಗತ ಕೋರಿದರು.