ತುರುವೇಕೆರೆ: ₹3 ಸಾವಿರ ಲಂಚ ಪಡೆಯುವಾಗ ತಾಲ್ಲೂಕು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಹರಿಪ್ರಸಾದ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತುಮಕೂರಿನ ಹನುಮಂತರಾಯಪ್ಪ ಅವರ ಮಗಳನ್ನು ಹೆರಿಗೆಗಾಗಿ ಪಟ್ಟಣದ ಆಸ್ಪತ್ರೆಗೆ ಡಿಸೆಂಬರ್ 19ರಂದು ದಾಖಲಿಸಲಾಗಿತ್ತು. ಮಹಿಳೆಗೆ ಸಹಜ ಹೆರಿಗೆಯಾಗಿತ್ತು. ಗುರುವಾರ ಆಸ್ಪತ್ರೆಯಿಂದ ಆಕೆಯನ್ನ ಮನೆಗೆ ಕಳುಹಿಸಲು ₹3 ಸಾವಿರ ನೀಡುವಂತೆ ಹೆರಿಗೆ ವೈದ್ಯ ಮತ್ತು ಆಡಳಿತ ವೈದ್ಯಾಧಿಕಾರಿ ಡಾ.ಹರಿಪ್ರಸಾದ್ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಹನುಮಂತರಾಯಪ್ಪ ಅವರಿಂದ ಗುರುವಾರ ಸಂಜೆ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.