ತುಮಕೂರು: ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ ಎಂದು ಬಿಜೆಪಿ ಟಿಕೆಟ್ ವಂಚಿತ ಮಾಜಿ ಸಚಿವ ಮಾಧುಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಾಪ್ ಸಿಂಹ, ಸಿ.ಟಿ.ರವಿ ಮೋದಿ ಮುಖ ನೋಡಿ ಕೆಲಸ ಮಾಡಬಹುದು. ಆದರೆ ನಾನು ಮಾಡಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಸೋಮಣ್ಣ ಗೆಲ್ಲೋದು ಸಂಸದ ಬಸವರಾಜು ಸೇರಿ ನನಗೂ ಇಷ್ಟವಿಲ್ಲ. ಸೋಮಣ್ಣ ಪರ ನಾನು ಕೆಲಸ ಮಾಡಲ್ಲ. ಯಡಿಯೂರಪ್ಪನವರೇ ( ಟಿಕೆಟ್ ಕೊಡೋದಾಗಿ ನನಗೆ ಆಸೆ ಹುಟ್ಟಿಸಿದ್ದರು. ಈಗ ಟಿಕೆಟ್ ಕೊಡಿಸುವಲ್ಲಿ ಅವರು ವಿಫಲರಾಗಿದ್ದಾರೆ. ನನಗೆ ಯಡಿಯೂರಪ್ಪ ಅವರ ಮೇಲೆ ಬೇಸರ ಇದೆ. ಎಂದು ಹೇಳಿದರು.
ವಿ.ಸೋಮಣ್ಣ ಹೊರಗಿನಿಂದ ಬಂದವರು. ಅವರು ಗೆಲ್ಲೋದು ಇಲ್ಲಿಯ ಮತದಾರರಿಗೆ ಬೇಡ. ಹಾಗಂತ ನಾನು ಕಾಂಗ್ರೆಸ್ಗೆ ಹೋಗುತ್ತೇನೆ ಎಂದು ತಪ್ಪು ತಿಳಿಯಬೇಡಿ. ಸೋಮಣ್ಣ ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ನಾನು ಕೆಲಸ ಮಾಡುತ್ತಿದ್ದೆ ಎಂದು ಹೇಳಿದರು.