ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗದ್ದೀಗೇರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ, 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು, ಆಸ್ಪತ್ರೆಗೆ ದಾಖಲಾಗಿರುವ ಘಟನೆ, ಗದ್ದೀಗೇರಹಟ್ಟಿಯಲ್ಲಿ ನಡೆದಿದೆ.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗದ್ದಿಗೇರ ಹಚ್ಚಿಯಲ್ಲಿ, ಓವರ್ ಟ್ಯಾಂಗ್ ನಿಂದ ಸರಬರಾಜಾದಂತ ನೀರನ್ನು ಸೇವಿಸಿದಂತ 20ಕ್ಕೂ ಹೆಚ್ಚು ಜನರು ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡಿದ್ದಾರೆ.
ಕೂಡಲೇ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕಳೆದ ಮೂರು ದಿನಗಳಿಂದ ಜನರು ಹೀಗೆ ಅಸ್ವಸ್ಥಗೊಳ್ಳುತ್ತಿರೋದಾಗಿ ತಿಳಿದು ಬಂದಿದೆ. ಗ್ರಾಮಕ್ಕೆ ಸರಬರಾಗುವಂತ ನೀರಿನ ಪೈಪ್ ಲೈನ್ ಒಡೆದು, ಕುಡಿಯುವ ನೀರಿಗೆ ಚರಂಡಿ ನೀರು ಸೇರಿದ್ದರಿಂದ ನೀರು ಕಲುಷಿತಗೊಂಡಿರೋದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.
ಇದೀಗ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವಂತ ವೈದ್ಯಾಧಿಕಾರಿಗಳು, ಅಸ್ವಸ್ಥಗೊಂಡಿರುವ ಜನರಿಗೆ ಗ್ರಾಮದಲ್ಲಿಯೇ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ. ಗ್ರಾಮ ಪಂಚಾಯ್ತಿ ಪಿಡಿಓ, ಜನಪ್ರತಿನಿಧಿಗಳು ಆಗಮಿಸಿ, ಅಸ್ವಸ್ಥಗೊಂಡಿರುವ ಜನರ ಆರೋಗ್ಯ ವಿಚಾರಿಸಿ,ಈ ಸಂಬಂಧ ಪರಿಶೀಲನೆ ನಡೆಸುತ್ತಿದ್ದಾರೆ.