ಬೆಂಗಳೂರು: ಎನ್.ಡಿ.ಆರ್.ಎಫ್ ಪರಿಹಾರಕ್ಕಾಗಿ ಐದು ತಿಂಗಳು ಕಾದು ಸಾಕಾಗಿ ಈಗ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆಹೋಗಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ವಿಟ್ ಪಿಟೀಷನ್ಗೆ ಅವಕಾಶ ಕೊಟ್ಟಿರುವ ೩೨ನೇ ವಿಧಿಯನ್ನು ಸಂವಿಧಾನದ ಹೃದಯ ಮತ್ತು ಆತ್ಮ ಎಂದಿರುವ ಸಿದ್ದರಾಮಯ್ಯ, ಅದರ ಅಡಿಯಲ್ಲಿ ಸುಪ್ರೀಂ ಕೋರ್ಟ್ ಮೊರೆಹೋಗಿದ್ದು, ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಮನವಿ ಮಾಡಲಾಗಿದೆ ಎಂದರು.