ರಾಮನಗರ: ರಾಮನಗರ ಸಮೀಪ ಹೆದ್ದಾರಿ ಬಳಿ ಮಾಟ ಮಂತ್ರ ಗಳ ಕಾಟ ಶುರುವಾಗಿದೆ. ಮಣ್ಣಿನಿಂದ ಮಾಡಿರುವ ಮೂರ್ತಿಗಳು ಗ್ರಾಮಸ್ಥರನ್ನು ಭಯವಾಗುವಂತೆ ಮಾಡಿದೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ಕೂಡಲೇ ಕಡಿವಾಣ ಹಾಕಬೇಕಾಗಿದೆ.
ಈ ಮೂರ್ತಿಗಳಲ್ಲಿ ಒಂದು ಗಂಡು ಹಾಗೂ ಇನ್ನೊಂದು ಹೆಣ್ಣು. ಅದಕ್ಕೆ ಕುಂಕುಮ, ಅರಿಶಿಣ, ಬಳೆ ಹಾಗೂ ಕೊರಳಲ್ಲಿ ವಿಚಿತ್ರವಾದ ದಾರವನ್ನು ಕಟ್ಟಲಾಗಿದೆ. ಈ ಹಿನ್ನಲೆ ಮೂರ್ತಿಗಳು ಭಯ ಮೂಡುವಂತಿದೆ. ಅದರ ಕಣ್ಣುಗಳು ನೋಡಿ ವಾಹನ ಸವಾರರು ಭಯಭೀತರಾಗಿದ್ದು, ಕೂಡಲೇ ಮೂರ್ತಿಗಳನ್ನು ತೆರವು ಮಾಡಿ, ಶುದ್ಧಿಕರಣಗೊಳಿಸಿ ಲೈಟ್ ಹಾಕುವಂತೆ ಸ್ಥಳೀಯರ ಮನವಿ ಮಾಡಿದ್ದಾರೆ.