ರಾಮನಗರ: ರಾಮನಗರದ ಜಾನಪದ ಲೋಕದಲ್ಲಿ ಜರುಗಿದ ಲೋಕೋತ್ಸವದಲ್ಲಿ ವೀರಾಜಪೇಟೆ ತಾಲೂಕಿನ ತೋರ ಗ್ರಾಮದ ಉರ್ಟಿ ಕೊಟ್ ಆಟ್ ನ ಹಿರಿಯ ಕಲಾವಿದೆ ಶ್ರೀಮತಿ ಶಾರದ ಸೋಮಯ್ಯ ಅವರಿಗೆ 2023ರ ಲಕ್ಷ್ಮಮ್ಮ ಎಚ್.ಎಲ್.ನಾಗೇಗೌಡ ಜಾನಪದ ಲೋಕ ಪ್ರಶಸ್ತಿಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಶ್ರೀ ಸದಾನಂದ ಗೌಡ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ಸಂದರ್ಭದಲ್ಲಿ ಜಾನಪದ ಕ್ಷೇತ್ರದಲ್ಲಿ ಅದ್ಭತೀಯ ಸಾಧನೆ ಮಾಡಿದ ಉತ್ತರ ಕರ್ನಾಟಕದ ಗೀಗಿ ಕಲಾವಿದೆ ಶ್ರೀಮತಿ ಎಲ್ಲವ್ವ ಮಾದರ, ಜಾನಪದ ಜಾದೂಗಾರ ಕಡಬ ಶ್ರೀನಿವಾಸ್ ಮುಂತಾದ ಒಟ್ಟು 17 ಕಲಾವಿದರು ಇಂದು ಪ್ರಶಸ್ತಿಗಳನ್ನು ಪಡೆದರು.
ಎರಡು ದಿನಗಳು ಜರುಗಿದ ಜಾನಪದ ಲೋಕೋತ್ಸವ ಸಮಾರಂಭದಲ್ಲಿ ರಾಜ್ಯದ ನೂರಾರು ಜಾನಪದ ಕಲಾವಿದರು ಭಾಗವಹಿಸಿ ಕಾರ್ಯಕ್ರಮವನ್ನು ಅದ್ಭುತವಾಗಿ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಕೊಡಗಿನ ಕುಡಿಯರು ಅತ್ಯುತ್ತಮ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಸಿರಿಗಂಧ ಶ್ರೀನಿವಾಸಮೂರ್ತಿ ಅವರು ಕಾರ್ಯಕ್ರಮದ ದಾಖಲೀಕರಣ ಮತ್ತು ಕಲಾವಿದರ ಸಂಘಟನೆಯನ್ನು ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.