ರಾಮನಗರ: ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ತಾಲ್ಲೂಕಿನ ಕೊಡಿಯಾಲ ಕರೇನಹಳ್ಳಿಯಲ್ಲಿ ಕಿಡ್ನಿ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಯೊಬ್ಬರಿಗೆ ಕ್ರಿಟಿಕಲ್ ಇಲ್ ನೆಸ್ ಕಾರ್ಯಕ್ರಮದಡಿ 25 ಸಾವಿರ ರೂಗಳ ಸಹಾಯಧನ ಚೆಕ್ ವಿತರಿಸಲಾಯಿತು.
ತಾಲ್ಲೂಕಿನ ಬಿಡದಿ ವಲಯದ ಕೊಡಿಯಾಲ ಕರೇನಹಳ್ಳಿ ಗ್ರಾಮದ ಆದಿಶಕ್ತಿ ಸ್ವಸಹಾಯ ಸಂಘದ ಸದಸ್ಯರಾದ ನಾಗರತ್ನ ಅವರ ಪತಿ ರಾಜು ಎಂಬುವರು ಕಿಡ್ನಿ ವೈಫಲ್ಯದಿಂದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಕಡುಬಡವರಾದ ರಾಜು ಪರಿಸ್ಥಿತಿಯ ಬಗ್ಗೆ ಮನವಿ ಸಲ್ಲಿಸಿದ್ದ ಮೇರೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೆಂದ್ರ ಹೆಗ್ಗಡೆ ಅವರು ಕ್ರಿಟಿಕಲ್ ಇಲ್ ನೆಸ್ ಕಾರ್ಯಕ್ರಮದಡಿ ರೋಗಿಯ ಔಷದೋಪಚಾರಕ್ಕೆ 25000 ರೂ.ಗಳನ್ನು ಮಂಜೂರು ಮಾಡಿದ್ದರು. ರಾಮನಗರ ತಾಲ್ಲೂಕಿನ ಯೋಜನಾಧಿಕಾರಿ ಮುರಳೀಧರ್ ಅವರು ಸದಸ್ಯರ ಮನೆಗೆ ಭೇಟಿ ನೀಡಿ ಸಹಾಯ ಧನದ ಚೆಕ್ ಅನ್ನು ಬುಧವಾರ ಫಲಾನುಭವಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕ ದೀಪಕ್, ಸೇವಾ ಪ್ರತಿನಿಧಿ ನಾರಾಯಣಮ್ಮ ಹಾಗೂ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.