News Karnataka Kannada
Monday, April 29 2024
ರಾಮನಗರ

ಮಾಗಡಿ: ಕೆರೆಗೆ ಹಾರಿದ ತಾಯಿಯನ್ನು ರಕ್ಷಿಸಲು ಹೋದ ಮಗಳು ಅಳಿಯ ಮೂವರು ನೀರುಪಾಲು

Suicide Jump River
Photo Credit :

ಮಾಗಡಿ,ಡಿ.22 : ಕೌಟುಂಬಿಕ ಕಲಹದಿಂದ ನೊಂದ ಮಹಿಳೆ ಕೆರೆಗೆ ಹಾರಿದ್ದನ್ನು ಕಂಡ ಮಗಳು, ಅಳಿಯ ರಕ್ಷಿಸಲು ಹೋಗಿ ಅವರೂ ನೀರುಪಾಲಾಗಿರುವ ದಾರುಣ ಘಟನೆ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ.

ತಾಲ್ಲೂಕಿನ ದಮ್ಮನಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಿದ್ದಮ್ಮ(55), ಮಗಳು ಸುಮಿತ್ರಾ(30), ಅಳಿಯ ಹನುಮಂತರಾಜು(35) ಮೃತಪಟ್ಟ ದುರ್ದೈವಿಗಳು. ಸಿದ್ದಮ್ಮ ಹಾಗೂ ಬೈಲನರಸಯ್ಯ ದಂಪತಿ ನಡುವೆ ಕ್ಷುಲ್ಲಕ ವಿಚಾರಕ್ಕಾಗಿ ತಡರಾತ್ರಿ ಜಗಳ ನಡೆದಿದ್ದು, ಸಿದ್ದಮ್ಮ ಏಕಾಏಕಿ ಮನೆಯಿಂದ ಹೊರಟು ಕೆರೆ ಬಳಿ ಹೋಗಿದ್ದಾರೆ.

ಇದರಿಂದ ಗಾಬರಿಗೊಂಡ ಮಗಳು ಸುಮಿತ್ರಾ ಹಾಗೂ ಅಳಿಯ ಹನುಂತರಾಜು ಕೂಡ ಹಿಂಬಾಲಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಸಿದ್ದಮ್ಮ ಕೆರೆಗೆ ಹಾರಿ ಚೀರಾಡುತ್ತಿದುದ್ದನ್ನು ಕಂಡ ಮಗಳು ಸುಮಿತ್ರಾ ತಾಯಿ ರಕ್ಷಿಸಲು ಕೆರೆಗೆ ಹಾರಿದ್ದಾಳೆ. ಇದನ್ನು ನೋಡಿದ ಅಳಿಯ ಹನುಮಂತರಾಜು
ಕೂಡ ಕೆರೆಗೆ ಇಳಿದು ಅತ್ತೆ ಹಾಗೂ ಹೆಂಡತಿಯನ್ನು ರಕ್ಷಿಸಲು ಮುಂದಾದರೂ ಕೂಡ ಸಾಧ್ಯವಾಗದೆ ಅವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಇತ್ತ ತಂದೆ-ತಾಯಿ ಮುಳುಗುತ್ತಿರುವುದನ್ನು ಕಂಡ ಸುಮಿತ್ರಾ ಮಗಳು ಕೀರ್ತನಾ ಸಹ ನೀರಿಗೆ ಇಳಿದಿದ್ದು, ಅಷ್ಟರಲ್ಲಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಕೀರ್ತನಾಳನ್ನು ರಕ್ಷಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಕುದೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೂವರ ಶವಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುದೂರು ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು