ಮಾಗಡಿ ತಾಲೂಕ್ ಆಸ್ಪತ್ರೆ ಆವರಣದಲ್ಲಿ ಕೆಆರ್ ಐಡಿಎಲ್ ನ ಸಿಎಸ್ ಆರ್ ಅನುದಾನದಲ್ಲಿ ನಿರ್ಮಿಸಲಾಗಿರುವ ಆಮ್ಲಜನಕ ಉತ್ಪಾದನಾ ಘಟಕ ನಿಮಿಷಕ್ಕೆ 580 ಲೀಟರ್ ಆಮ್ಲಜನಕ ಉತ್ಪಾದಿಸಬಲ್ಲದಾಗಿದೆ. ಇದರಿಂದಾಗಿ ಆಸ್ಪತ್ರೆಯು ಆಮ್ಲಜನಕ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದಂತಾಗಿದೆ ಎಂದು ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ನಂತರ ತಾಲೂಕಿನ ಕರಲಮಂಗಲಕ್ಕೆ ಭೇಟಿ ನೀಡಿ, ಸಂಜೀವಿನಿ ಒಕ್ಕೂಟದ ಮಹಿಳಾ ಸ್ವ-ಸಹಾಯ ಗುಂಪುಗಳ ಮಹಿಳೆಯರೇ ನಿರ್ವಹಣೆ ಮಾಡುತ್ತಿರುವ ‘ಬಾಡಿಗೆ ಆಧಾರಿತ ಕೃಷಿ ಯಂತ್ರೋಪಕರಣ ಕೇಂದ್ರ ವನ್ನು ಸಚಿವರು ವೀಕ್ಷಿಸಿದರು. ಮಹಿಳೆಯರು ಈ ಯಂತ್ರಗಳ ಮೂಲಕ ಮಾಸಿಕ ಅಂದಾಜು 60,000 ರೂಪಾಯಿ ದುಡಿಯುತ್ತಿದ್ದು, ಅವರೊಂದಿಗೆ ಸಂವಾದ ನಡೆಸಿದರು .