News Karnataka Kannada
Sunday, May 05 2024
ರಾಮನಗರ

ಗಾಣಕಲ್ ಕೆರೆಯ ಶುದ್ದೀಕರಣಕ್ಕೆ ಮನವಿ

Kere
Photo Credit :

ರಾಮನಗರ: ಮಲೀನಗೊಂಡಿರುವ ಪುರಾತನ ಕೆರೆಯನ್ನು ಶುದ್ಧೀಕರಿಸಿ ಪರಿಸರ ಮಾಲಿನ್ಯವನ್ನು ತಡೆಯಬೇಕೆಂದು ತಾ.ಪಂ ಮಾಜಿ ಅಧ್ಯಕ್ಷ ಗಾಣಕಲ್ ನಟರಾಜು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಮಾಡಿದ್ದಾರೆ.

ತಾಲ್ಲೂಕಿನ ಬನ್ನಿಕುಪ್ಪೆ(ಬಿ) ಗ್ರಾಪಂ ವ್ಯಾಪ್ತಿಯ ಗಾಣಕಲ್ ಗ್ರಾಮದ ಸಮೀಪ ಇರುವ ಪುರಾತನ ಕೆರೆಗೆ ಆಸುಪಾಸಿನಲ್ಲಿರುವ  ಗ್ರಾಮಗಳ ಚರಂಡಿ ನೀರು ಸೇರಿ ಸಂಪೂರ್ಣ ಕಲುಷಿತಗೊಂಡಿದೆ. ಹೀಗಾಗಿ ಕಳೆದ 15 ದಿನಗಳ ಹಿಂದೆ ಸಾವಿರಾರು ಮೀನುಗಳು ಸತ್ತಿದ್ದು, ನೀರಿನಲ್ಲಿ ಕೊಳೆಯುತ್ತಿರುವುದರಿಂದ ಇಡೀ ಪ್ರದೇಶವೇ ಗಬ್ಬೆದ್ದು ನಾರುತ್ತಿದೆ. ಇದರಿಂದ ಸಾಂಕ್ರ್ರಾಮಿಕ ರೋಗ ಹರಡುವ ಪರಿಸ್ಥಿತಿ ಎದುರಾಗಿದೆ ಎಂದು ದೂರಿದ್ದಾರೆ.

ಗಾಣಕಲ್ ಗ್ರಾಮ ಮತ್ತು ಪಕ್ಕದ ಅಂಕನಹಳ್ಳಿ ಗ್ರಾಮಗಳ ಕಡೆಯಿಂದ ಚರಂಡಿ ನೀರು ಮತ್ತು ಇತರೆ ಮಲೀನ ನೀರು ನೇರವಾಗಿ ಈ ಕೆರೆಯನ್ನು ಸೇರುತ್ತಿದೆ. ಈ ಮೊದಲು ಕೆರೆಯ ನೀರನ್ನು ಜಾನುವಾರುಗಳು ಕುಡಿಯುತ್ತಿದ್ದವು. ಈಗ ಜಾನುವಾರುಗಳು  ಕುಡಿಯದಷ್ಟು ನೀರು ಮಲೀನವಾಗಿದೆ. ಈ ಕೆರೆಯನ್ನು ಉಳಿಸಿಕೊಳ್ಳಬೇಕಾಗಿದೆ. ಗಾಣಕಲ್ ಗ್ರಾಮ ಮತ್ತು ಅಂಕನಹಳ್ಳಿ ಗ್ರಾಮಗಳ ಕಡೆಯಿಂದ ಹರಿದು ಬರುತ್ತಿರುವ ಕೊಳಕು ನೀರನ್ನು ತಡೆಯಬೇಕಾಗಿದೆ.

ಕೊಳಕು ನೀರು ಕೆರೆಗೆ ಹರಿಯದಂತೆ ಪ್ರತ್ಯೇಕಗೊಳಿಸಿ ಚರಂಡಿ ಮೂಲಕ ಸಾಗುವಂತೆ ವ್ಯವಸ್ಥೆ ಮಾಡಬೇಕಾಗಿದೆ. ನೈಸರ್ಗಿಕ  ನೀರು ಮಾತ್ರ ಕೆರೆ ಸೇರುವಂತೆ ಮಾಡಲು ಅಗತ್ಯವಾದ ಕಾಮಗಾರಿಯನ್ನು ಕೈಗೊಳ್ಳಬೇಕಾಗಿದೆ. ತಕ್ಷಣವೇ ಕೆರೆ ಶುದ್ಧೀಕರಣ ಮತ್ತು ಚರಂಡಿ ನೀರು ಬೇರ್ಪಡಿಸುವ ವ್ಯವಸ್ಥೆ ಕಲ್ಪಿಸಲು ಸೂಕ್ತ ಅನುದಾನವನ್ನು ಜಿಪಂ ಸಿಇಒ ಅವರು ಬಿಡುಗಡೆ ಮಾಡಬೇಕು ಎಂದು ಅವರ ಮನವಿ ಮಾಡಿದ್ದಾರೆ.

ಮನವಿಯ ಪ್ರತಿಯನ್ನು ಬನ್ನಿಕುಪ್ಪೆ (ಬಿ) ಗ್ರಾಪಂ ಪಿಡಿಒ ಮತ್ತು ತಾಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿಗಳಿಗೆ  ಸಲ್ಲಿಸಿದ್ದು, ಜಿಪಂ ಸಿಇಒ ಅವರನ್ನು ಭೇಟಿ ಮಾಡಿ ಗಮನಸೆಳೆಯುವುದಾಗಿ ಗಾಣಕಲ್ ನಟರಾಜು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು